ನಿರ್ದೇಶಕ ಶ್ರೀಹರಿ ಆನಂದ್ ನೇತೃತ್ವದ ಚಿತ್ರತಂಡದ ಒಂದು ವರ್ಷದ ಕನಸು ಪರದೆ ಮೇಲೆ ಟೀಸರ್ ರೂಪ ತಳೆದಿತ್ತು. ಈ ತಂಡದ ಎಲ್ಲರೂ ಹೊಸಬರು. ಸಿನಿಮಾದ ದೃಶ್ಯಗಳು ಕಂಡಾಗ ಎಲ್ಲರಲ್ಲೂ ಹೊಸ ಹುರುಪು ಕಂಡಿತು.ಮೈಕ್ ಕೈಗೆತ್ತಿಕೊಂಡ ಶ್ರೀಹರಿ ಆನಂದ್, ‘ನಾವು ನಮ್ಮ ಕೆಲಸವನ್ನಷ್ಟೇ ಮಾಡಬೇಕು. ಫಲಾಫಲವನ್ನು ಭಗವಂತನ ಇಚ್ಛೆಗೆ ಬಿಡಬೇಕು. ಈ ಸಿನಿಮಾದ ಸಂದೇಶವೂ ಇದೇ ಆಗಿದೆ’ ಎಂದರು.