ಎಂಬತ್ತರ ದಶಕದಲ್ಲಿ ನರಗುಂದ ಭಾಗದಲ್ಲಿ ಒಂದು ಎಕರೆ ಒಣ ಜಮೀನಿನ ಬೆಲೆ ಇದ್ದಿದ್ದು ಅಂದಾಜು ₹ 2,500 ಮಾತ್ರ. ಇಂತಹ ಪ್ರದೇಶದಲ್ಲಿ ಅಭಿವೃದ್ಧಿ ಕರ ಎಂದು ರಾಜ್ಯ ಸರ್ಕಾರ ಪ್ರತಿ ಎಕರೆಗೆ ₹ 2,500 ನಿಗದಿ ಮಾಡಿತು. ಇದನ್ನು ವಿರೋಧಿಸಿ ಮಣ್ಣಿನ ಮಕ್ಕಳು ಹೋರಾಟದ ಹಾದಿ ಹಿಡಿದರು. ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ಹಾರಿಸಿದ ಗುಂಡಿಗೆ ಇಬ್ಬರು ರೈತರು ಬಲಿಯಾದರು. ಇದು ಈ ಚಿತ್ರದ ಕಥೆ.