ಈ ನೌಕರರಿಗೆ ಬರೀ ಮುಂಗಡ ವೇತನವಷ್ಟೇ ಅಲ್ಲ, ವೇತನ ಸಹಿತ ರಜೆಯನ್ನೂ ನೀಡಿದ್ದಾರೆ. ತುರ್ತು ಸಂದರ್ಭದಲ್ಲಿ ಹಣಕಾಸಿನ ಅಗತ್ಯಬಿದ್ದರೆ, ಹಿಂಜರಿಕೆ ಮಾಡದೇ ತಮ್ಮನ್ನು ಸಂಪರ್ಕಿಸುವಂತೆ ತಿಳಿಸಿದ್ದಾರಂತೆ. ನೌಕರರಿಗಷ್ಟೇ ಅಲ್ಲ, ತಮ್ಮ ಮನೆಯ ಸುತ್ತಮುತ್ತಲಿರುವ ಪರಿಚಿತರ ಸಂಕಷ್ಟಕ್ಕೂ ಸ್ಪಂದಿಸುತ್ತಿರುವುದಾಗಿ ಅವರ ಆಪ್ತ ಮೂಲಗಳು ತಿಳಿಸಿವೆ.