ಕಿರುತೆರೆ ನಿರ್ದೇಶಕ ರಾಮಚಂದ್ರ ವೈದ್ಯ ಈಗ ಬೆಳ್ಳಿತೆರೆಗೆ ಪ್ರವೇಶಿಸಿದ್ದಾರೆ. ಅವರ ನಿರ್ದೇಶನದ ‘ಒಂದಂಕೆಕಾಡು’ ಸಿನಿಮಾ ಸಿದ್ಧವಾಗುತ್ತಿದ್ದು, ಇತ್ತೀಚೆಗಷ್ಟೇ ಚಿತ್ರದ ಪೋಸ್ಟರ್ ಬಿಡುಗಡೆ ಆಗಿದೆ.
ದಟ್ಟ ಅರಣ್ಯ... ಮರದ ಬೇರಿನಿಂದ ಸೃಷ್ಟಿಸಿರುವ ಆಕೃತಿ, ಅರಣ್ಯದಲ್ಲಿ ಕುಳಿತಿರುವ ಎರಡು ಜೋಡಿಯ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಒಂದಂಕೆ ಕಾಡು’ ಸಿನಿಮಾದಲ್ಲಿ ಪ್ರಜ್ವಲ್ ಪೊನ್ನಣ್ಣ, ಸೋನಿ, ನೀರ್ನಳ್ಳಿ ರಾಮಕೃಷ್ಣ, ಕಿರಣ್ ನಾಯಕ್, ಮಧು ಹೆಗಡೆ, ಸುಮಂತ್ ಭಟ್, ಪ್ರೇರಣಾ ಕಂಬಂ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.
‘ಒಂದಂಕೆ ಕಾಡು’ ಸಿನಿಮಾಗೆ ಶ್ರಾವಣಿ ಶಿವ್ ಕಥೆ, ರಾಮಚಂದ್ರ ವೈದ್ಯ ಚಿತ್ರಕಥೆ ಬರೆದಿದ್ದಾರೆ. ಟಿ.ಜಿ. ನಂದೀಶ್ ಸಂಭಾಷಣೆ, ಗಣೇಶ್ ಹೆಗ್ಡೆ ಕ್ಯಾಮೆರಾ, ಶ್ರೀಕಾಂತ್ ಸಂಕಲನ, ಮಧು ಹೆಗ್ಡೆ ಸಂಗೀತ ಸಿನಿಮಾದಲ್ಲಿದೆ. ಕನ್ನಡ ಮತ್ತು ತೆಲುಗಿನಲ್ಲಿ ಸಿನಿಮಾ ತಯಾರಾಗಿದೆ. ಶ್ರೀಮಹಾಕಾಳಿ ಪ್ರೊಡಕ್ಷನ್ ಲಾಂಛನದ ಅಡಿ ಸಿನಿಮಾ ಮೂಡಿ ಬರುತ್ತಿದೆ. ಕಾರವಾರ ಸುತ್ತಮುತ್ತ ಶೂಟಿಂಗ್ ಮಾಡಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ನಲ್ಲಿ ನಿರತವಾಗಿದೆ.