ಮರುಬಳಕೆ ಮಾಡಲಾದ ಶೀರ್ಷಿಕೆ ಹೊಂದಿದ್ದ ಹೊಸ ಸಿನಿಮಾಗಳ ಪೋಸ್ಟರ್ಗಳನ್ನು ಪ್ರದರ್ಶಿಸಿದ ಸದಸ್ಯರು ಈ ರೀತಿ ಶೀರ್ಷಿಕೆ ಮರುಬಳಕೆಗೆ ಅವಕಾಶ ನೀಡಬಾರದು ಎಂದು ಮನವಿಪತ್ರವನ್ನು ವಾಣಿಜ್ಯ ಮಂಡಳಿಗೆ ನೀಡಿದರು.‘ಅಣ್ಣಾವ್ರ ಸಿನಿಮಾಗಳ ಶೀರ್ಷಿಕೆ ಕಥೆಗೆ ಹೊಂದಿಕೊಂಡಿರುವಂತೆ ಇತ್ತು. ಆ ಸಿನಿಮಾಗಳು ಉತ್ತಮ ಸಂದೇಶ ಹೊಂದಿದ್ದವು. ಇಷ್ಟು ಸಂಖ್ಯೆಯ ಅಭಿಮಾನಿಗಳನ್ನು ರಾಜ್ಕುಮಾರ್ ಅವರು ಹೊಂದಿದ್ದಾರೆ ಎಂದರೆ ಅದರ ಹಿಂದೆ ಅವರ ದೊಡ್ಡ ತ್ಯಾಗ ಇದೆ. ನಿರ್ಮಾಪಕರು, ನಿರ್ದೇಶಕರು ಈ ಶೀರ್ಷಿಕೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಅಭಿಮಾನಿಗಳಿಗೆ ನೋವಾಗುತ್ತದೆ.ಯಾರೇ ಆದರೂ ಶೀರ್ಷಿಕೆ ಮರುಬಳಕೆ ಮಾಡಿದರೆ ಸಿನಿಮಾ ಚಿತ್ರೀಕರಣಕ್ಕೆ ಮುತ್ತಿಗೆ ಹಾಕುತ್ತೇವೆ. ರಾಜ್ಯದಾದ್ಯಂತ ಹೋರಾಟ ಮಾಡುತ್ತೇವೆ. ಚಿತ್ರಮಂದಿರಗಳ ಮುಂದೆ ಪ್ರತಿಭಟನೆ ಮಾಡುತ್ತೇವೆ’ ಎಂದುಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಸದಸ್ಯರು ಎಚ್ಚರಿಕೆ ನೀಡಿದರು.