ಮಾಸ್ತಿ ಮತ್ತು ಕಾಂತರಾಜ್ ಕತೆ ಬರೆದಿರುವ ‘ಪಂಚತಂತ್ರ’ ಚಿತ್ರದಲ್ಲಿ ವಿಹಾನ್ ಮತ್ತು ಸೋನಲ್ ಮೊಂತೆರೊ ನಾಯಕ– ನಾಯಕಿಯಾಗಿ ನಟಿಸಿದ್ದಾರೆ. ಅಕ್ಷರಾ ಗೌಡ, ರಂಗಾಯಣ ರಘು, ಕರಿಸುಬ್ಬು ಮುಂತಾದವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಸುಜ್ಞಾನ್ ಛಾಯಾಗ್ರಹಣ, ಹರಿಕೃಷ್ಣ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಸದ್ಯವೇ ಚಿತ್ರದ ಆಡಿಯೊ ಬಿಡುಗಡೆ ಮಾಡುವ ಸಿದ್ಧತೆಯಲ್ಲಿ ಚಿತ್ರತಂಡವಿದೆ.ಒಂದೊಮ್ಮೆ ಡಿಸೆಂಬರ್ ಕೊನೆಯ ವಾರಕ್ಕೆ ‘ಪಂಚತಂತ್ರ’ ಬಿಡುಗಡೆಯಾಗಿ ಯಶಸ್ವಿಯಾದರೆ ವರ್ಷದ ಕೊನೆಯ ಶುಕ್ರವಾರ ಕುರಿತ ಲಕ್ಕಿ ನಂಬಿಕೆಗೆ ಇನ್ನಷ್ಟು ಪುಷ್ಟಿ ದೊರೆತಂತಾಗುತ್ತದೆ.