‘ಚಿತ್ರದ ನಾಯಕಿ, ಹೆಚ್ಚು ಬುದ್ದಿಶಕ್ತಿಯುಳ್ಳವಳು. ಎಲ್ಲರ ಮನಸ್ಸನ್ನು ಗ್ರಹಿಸುವ ಸಾಮರ್ಥ್ಯ ಹೊಂದಿರುತ್ತಾಳೆ. ಅಪರಾಧಿಗಳನ್ನು ಚಾಣಾಕ್ಷತನದಿಂದ ಹೇಗೆ ಪತ್ತೆಹಚ್ಚುತ್ತಾಳೆ ಎನ್ನುವುದೇ ಚಿತ್ರಕಥೆ. ಪ್ರಿಯಾಂಕ ಅವರು ಎಲ್ಲೂ ಈ ರೀತಿಯ ಪಾತ್ರ ಮಾಡಿಲ್ಲ. ಕನ್ನಡ ಮತ್ತು ತೆಲುಗು ಭಾಷೆಗೆ ಹೊಂದುವಂತಹ ಶೀರ್ಷಿಕೆ ಇಡಲಾಗುವುದು. ಮುಹೂರ್ತ ದಿನದಂದು ಶೀರ್ಷಿಕೆ ಅನಾವರಣಗೊಳಿಸುತ್ತೇವೆ’ ಎನ್ನುತ್ತಾರೆ ರಘು. ಮನುದಾಸಪ್ಪ ಛಾಯಾಗ್ರಹಣ ಚಿತ್ರಕ್ಕಿದ್ದು, ಬೆಂಗಳೂರು, ಮೂಡಿಗೆರೆ, ಚಿಕ್ಕಮಗಳೂರು ಮತ್ತು ಉಪ್ಪಿನಂಗಡಿ ಸುತ್ತಮುತ್ತ ಚಿತ್ರೀಕರಣ ನಡೆಸಲು ಚಿತ್ರತಂಡವು ನಿರ್ಧರಿಸಿದೆ.