ಬಿಗಿಯಾದ ನಿರೂಪಣೆ ಮತ್ತು ಹದವರಿತ ಅಭಿನಯ ‘ಭಾಗಮತಿ’ ಯಶಸ್ಸಿನ ಮುಖ್ಯ ಕಾರಣಗಳು. ಈ ಚಿತ್ರದ ನಿರ್ದೇಶಕ ಜಿ. ಅಶೋಕ್ 2012ರಲ್ಲಿಯೇ ‘ಭಾಗಮತಿ’ಯ ಚಿತ್ರಕಥೆ ಸಿದ್ಧಪಡಿಸಿ, ಅನುಷ್ಕಾ ಶೆಟ್ಟಿಗೆ ಹೇಳಿದ್ದರು. ಆದರೆ ‘ಬಾಹುಬಲಿ’ ಸರಣಿ ಮತ್ತು ‘ರುದ್ರಮಾದೇವಿ’ಯಲ್ಲಿ ತೊಡಗಿಸಿಕೊಂಡಿದ್ದ ಅನುಷ್ಕಾ ತಕ್ಷಣ ಒಪ್ಪಿಕೊಳ್ಳುವುದು ಕಷ್ಟ ಎಂದಿದ್ದರು. ಆದರೆ, ಅನುಷ್ಕಾ ಬಿಟ್ಟು ಬೇರ್ಯಾರನ್ನೂ ‘ಭಾಗಮತಿ’ಯಾಗಿ ಕಲ್ಪಿಸಿಕೊಳ್ಳಲು ಅಶೋಕ್ಗೆ ಆಗಲಿಲ್ಲ.