ಈ ಚಿತ್ರದ ಸ್ಕ್ರಿಪ್ಟ್ ಕೆಲಸ ಪೂರ್ಣಗೊಂಡಿಲ್ಲ. ಅದನ್ನು ಬರೆದು, ಪೂರ್ಣಗೊಳಿಸುವ ಕೆಲಸದಲ್ಲಿ ರಾಜ್ ಅವರು ಮಂಡೆಬಿಸಿ ಮಾಡಿಕೊಂಡು ತೊಡಗಿಕೊಂಡಿದ್ದಾರೆ. ‘ಮೇ ತಿಂಗಳಲ್ಲಿ ಚಿತ್ರೀಕರಣ ಮುಗಿದ ನಂತರ, ಇನ್ನುಳಿದ ಭಾಗವನ್ನು ಮಳೆಗಾಲ ಮುಗಿದ ನಂತರ ಚಿತ್ರೀಕರಿಸಿಕೊಳ್ಳಬೇಕು’ ಎನ್ನುತ್ತಿದ್ದಾರೆ ಅವರು. ಅಂದಹಾಗೆ, ಅವರು ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಅಂತಿಮಗೊಳಿಸಿಲ್ಲ.