<p><strong>ಹೈದರಾಬಾದ್</strong>: ಮಹೇಶ್ಬಾಬು ನಟನೆಯ ವಾರಾಣಸಿ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ನಡುವೆ ಸಿನಿಮಾದ ಚಿತ್ರೀಕರಣಕ್ಕೆಂದು ನಿರ್ದೇಶಕ ಎಸ್. ಎಸ್.ರಾಜಮೌಳಿ ಅವರು ಹೈದರಾಬಾದ್ ಮಹಾನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಬಳಿ 15 ಲಕ್ಷ ಲೀಟರ್ ನೀರನ್ನು ಕೊಡುವಂತೆ ಕೇಳಿದ್ದಾರೆ. </p><p>ಬಿರು ಬೇಸಿಗೆಯಲ್ಲಿ ಈಗಾಗಲೇ ನೀರಿನ ಅಭಾವ ಉಂಟಾಗಿರುವ ಕಾರಣ ಅಧಿಕಾರಿಗಳು ರಾಜಮೌಳಿ ಅವರ ಕೋರಿಕೆಯನ್ನು ಪೂರೈಸಲು ನಿರಾಕರಿಸಿದ್ದಾರೆ ಎಂದು ವರದಿ ತಿಳಿಸಿದೆ.</p>.ತೆಲುಗು: ಒಂದೇ ಭಾಗದಲ್ಲಿ ‘ವಾರಾಣಸಿ’ .ಹೊರಬಿತ್ತು ಮಹೇಶ್ ಬಾಬು ಅಭಿನಯದ ‘ವಾರಾಣಸಿ’ ಸಿನಿಮಾ ಬಿಡುಗಡೆ ದಿನಾಂಕ.<p><strong>ಅಷ್ಟೊಂದು ನೀರು ಯಾಕೆ?</strong></p><p>ರಾಜಮೌಳಿ ಅವರು ನೀರಿನ ಆಳದಲ್ಲಿ ನಡೆಯುವ ದೃಶ್ಯಗಳನ್ನು ಚಿತ್ರೀಕರಿಸಲು 15 ಲಕ್ಷ ಲೀಟರ್ ಅಂದರೆ 10 ಸಾವಿರ ಲೀಟರ್ ಸಾಮರ್ಥ್ಯದ ಸುಮಾರು 150 ಟ್ಯಾಂಕರ್ ನೀರಿಗಾಗಿ ಬೇಡಿಕೆ ಇಟ್ಟಿದ್ದರು.</p><p>ಗಗನ್ಪಹಾದ್ನಲ್ಲಿರುವ ಫಿಲ್ಮ್ ಸ್ಟುಡಿಯೋದಲ್ಲಿ ವಿಶೇಷವಾಗಿ ನಿರ್ಮಿಸಲಾದ ಸೆಟ್ಗಾಗಿ ಬೃಹತ್ ಪ್ರಮಾಣದ ನೀರನ್ನು ಕೇಳಿದ್ದರು. </p><p>ವಾರಾಣಸಿ ಸಿನಿಮಾದಲ್ಲಿ ಮಹೇಶ್ ಬಾಬು ಜೊತೆಗೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತೆರೆ ಹಂಚಿಕೊಂಡಿದ್ದಾರೆ. ಇವರಲ್ಲದೆ ಪೃಥ್ವಿರಾಜ್ ಸುಕುಮಾರನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. </p><p>ಸಿನಿಮಾ ಚಿತ್ರೀಕರಣವನ್ನು ಭಾರತ ಮಾತ್ರವಲ್ಲದೆ ಕೀನ್ಯಾ, ಅಂಟಾರ್ಟಿಕಾದಲ್ಲೂ ಮಾಡಿದ್ದಾರೆ. ವರದಿಗಳ ಪ್ರಕಾರ ವಾರಾಣಸಿ ₹1,400 ಕೋಟಿ ಬಜೆಟ್ನ ಸಿನಿಮಾವಾಗಿದೆ. 2027ರ ಏಪ್ರಿಲ್ 7ರಂದು ಸಿನಿಮಾ ಬಿಡುಗಡೆಯಾಗುವುದಾಗಿ ಚಿತ್ರತಂಡ ಹೇಳಿದೆ. </p>.Varanasi Movie | ರುದ್ರನಾಗಿ ಮಹೇಶ್ ಬಾಬು: 2027ರ ಸಂಕ್ರಾಂತಿಗೆ ತೆರೆಗೆ.Varanasi | ರಾಜಕುಮಾರಿಯಂತೆ ಮಿಂಚಿದ ಪ್ರಿಯಾಂಕಾ ಚೋಪ್ರಾ: ಚಿತ್ರಗಳಲ್ಲಿ ನೋಡಿ.SS ರಾಜಮೌಳಿ-ಮಹೇಶ್ ಬಾಬು ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್: ಪೋಸ್ಟರ್ ಬಿಡುಗಡೆ.Rajamouli New Movie: ‘ವಾರಾಣಸಿ’ಯಲ್ಲಿ ‘ರುದ್ರ’ನಾದ ಮಹೇಶ್ ಬಾಬು .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್</strong>: ಮಹೇಶ್ಬಾಬು ನಟನೆಯ ವಾರಾಣಸಿ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ನಡುವೆ ಸಿನಿಮಾದ ಚಿತ್ರೀಕರಣಕ್ಕೆಂದು ನಿರ್ದೇಶಕ ಎಸ್. ಎಸ್.ರಾಜಮೌಳಿ ಅವರು ಹೈದರಾಬಾದ್ ಮಹಾನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಬಳಿ 15 ಲಕ್ಷ ಲೀಟರ್ ನೀರನ್ನು ಕೊಡುವಂತೆ ಕೇಳಿದ್ದಾರೆ. </p><p>ಬಿರು ಬೇಸಿಗೆಯಲ್ಲಿ ಈಗಾಗಲೇ ನೀರಿನ ಅಭಾವ ಉಂಟಾಗಿರುವ ಕಾರಣ ಅಧಿಕಾರಿಗಳು ರಾಜಮೌಳಿ ಅವರ ಕೋರಿಕೆಯನ್ನು ಪೂರೈಸಲು ನಿರಾಕರಿಸಿದ್ದಾರೆ ಎಂದು ವರದಿ ತಿಳಿಸಿದೆ.</p>.ತೆಲುಗು: ಒಂದೇ ಭಾಗದಲ್ಲಿ ‘ವಾರಾಣಸಿ’ .ಹೊರಬಿತ್ತು ಮಹೇಶ್ ಬಾಬು ಅಭಿನಯದ ‘ವಾರಾಣಸಿ’ ಸಿನಿಮಾ ಬಿಡುಗಡೆ ದಿನಾಂಕ.<p><strong>ಅಷ್ಟೊಂದು ನೀರು ಯಾಕೆ?</strong></p><p>ರಾಜಮೌಳಿ ಅವರು ನೀರಿನ ಆಳದಲ್ಲಿ ನಡೆಯುವ ದೃಶ್ಯಗಳನ್ನು ಚಿತ್ರೀಕರಿಸಲು 15 ಲಕ್ಷ ಲೀಟರ್ ಅಂದರೆ 10 ಸಾವಿರ ಲೀಟರ್ ಸಾಮರ್ಥ್ಯದ ಸುಮಾರು 150 ಟ್ಯಾಂಕರ್ ನೀರಿಗಾಗಿ ಬೇಡಿಕೆ ಇಟ್ಟಿದ್ದರು.</p><p>ಗಗನ್ಪಹಾದ್ನಲ್ಲಿರುವ ಫಿಲ್ಮ್ ಸ್ಟುಡಿಯೋದಲ್ಲಿ ವಿಶೇಷವಾಗಿ ನಿರ್ಮಿಸಲಾದ ಸೆಟ್ಗಾಗಿ ಬೃಹತ್ ಪ್ರಮಾಣದ ನೀರನ್ನು ಕೇಳಿದ್ದರು. </p><p>ವಾರಾಣಸಿ ಸಿನಿಮಾದಲ್ಲಿ ಮಹೇಶ್ ಬಾಬು ಜೊತೆಗೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತೆರೆ ಹಂಚಿಕೊಂಡಿದ್ದಾರೆ. ಇವರಲ್ಲದೆ ಪೃಥ್ವಿರಾಜ್ ಸುಕುಮಾರನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. </p><p>ಸಿನಿಮಾ ಚಿತ್ರೀಕರಣವನ್ನು ಭಾರತ ಮಾತ್ರವಲ್ಲದೆ ಕೀನ್ಯಾ, ಅಂಟಾರ್ಟಿಕಾದಲ್ಲೂ ಮಾಡಿದ್ದಾರೆ. ವರದಿಗಳ ಪ್ರಕಾರ ವಾರಾಣಸಿ ₹1,400 ಕೋಟಿ ಬಜೆಟ್ನ ಸಿನಿಮಾವಾಗಿದೆ. 2027ರ ಏಪ್ರಿಲ್ 7ರಂದು ಸಿನಿಮಾ ಬಿಡುಗಡೆಯಾಗುವುದಾಗಿ ಚಿತ್ರತಂಡ ಹೇಳಿದೆ. </p>.Varanasi Movie | ರುದ್ರನಾಗಿ ಮಹೇಶ್ ಬಾಬು: 2027ರ ಸಂಕ್ರಾಂತಿಗೆ ತೆರೆಗೆ.Varanasi | ರಾಜಕುಮಾರಿಯಂತೆ ಮಿಂಚಿದ ಪ್ರಿಯಾಂಕಾ ಚೋಪ್ರಾ: ಚಿತ್ರಗಳಲ್ಲಿ ನೋಡಿ.SS ರಾಜಮೌಳಿ-ಮಹೇಶ್ ಬಾಬು ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್: ಪೋಸ್ಟರ್ ಬಿಡುಗಡೆ.Rajamouli New Movie: ‘ವಾರಾಣಸಿ’ಯಲ್ಲಿ ‘ರುದ್ರ’ನಾದ ಮಹೇಶ್ ಬಾಬು .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>