ಕಾಡಿನ ಹಿನ್ನೆಲೆ ಇರುವ ಈ ಸಿನಿಮಾದ ಕತೆಯನ್ನು ನಾನೇ ಬರೆದಿದ್ದೇನೆ. ರಾಜಮೌಳಿ ಜೊತೆಯಲ್ಲಿ ಚಿತ್ರಕತೆ ಸಿದ್ದಪಡಿಸಲಾಗುತ್ತಿದೆ. ಇದೇ ವರ್ಷದಲ್ಲಿಮಹೇಶ್ ಬಾಬು ಅವರು ತ್ರಿವಿಕ್ರಮ ಶ್ರೀನಿವಾಸ್ ಜತೆ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರದ ಶೂಟಿಂಗ್ ಪೂರ್ಣಗೊಂಡ ಬಳಿಕ, 2023ರ ಜೂನ್–ಜುಲೈನಲ್ಲಿ ನಮ್ಮ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ ಎಂದು ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ.