ಮುಂಬೈ: ತನುಶ್ರೀ ದತ್ತಾ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾಳೆ ಎಂದು ಆರೋಪಿಸಿದ್ದ ಬಾಲಿವುಡ್ ನಟಿ ರಾಖಿ ಸಾವಂತ್ ಇದೀಗ ಮಹಿಳೆಯರು ತಮ್ಮ ಮಾನ ರಕ್ಷಣೆಗಾಗಿ ಏನು ಮಾಡಬೇಕೆಂಬ ಸಲಹೆ ನೀಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ವಿಡಿಯೊವೊಂದನ್ನು ಅಪ್ಲೋಡ್ ಮಾಡಿರುವ ರಾಖಿ ಸಾವಂತ್ ಹೆಣ್ಣು ಮಕ್ಕಳು ಹೊರಹೋಗುವಾಗ ಮಾನ ರಕ್ಷಣೆಗಾಗಿ ದೇಹಕ್ಕೆ ಗೋದ್ರೆಜ್ ಬೀಗ ಹಾಕಿಕೊಂಡು ಹೋಗಬೇಕು ಎಂದು ಹೇಳಿದ್ದಾರೆ.
ತಾನು ವಿಜ್ಞಾನಿ ರಾಖಿ ಸಾವಂತ್ ಎಂದು ಹೇಳಿಕೊಂಡಿರುವ ಈಕೆ, ಲೈಂಗಿಕ ದೌರ್ಜನ್ಯದಿಂದ ಪಾರಾಗಲು ತಾನು ಹೊಸ ಉಪಾಯವೊಂದನ್ನು ಕಂಡುಕೊಂಡಿದ್ದೇನೆ.ಹೆಣ್ಣು ಮಕ್ಕಳು ಈ ರೀತಿ ದೇಹದ ಅಂಗಗಳಿಗೆ ಗೋದ್ರೆಜ್ ಬೀಗ ಹಾಕಿಕೊಂಡರೆ ಲೈಂಗಿಕ ದೌರ್ಜನ್ಯದಿಂದ ಪಾರಾಗಬಹುದು ಎಂದಿದ್ದಾರೆ.