ತೆಲುಗು ನಟ ರಾಮಚರಣ್ ಅವರು ‘ಗ್ರೀನ್ ಇಂಡಿಯಾʼ ಸವಾಲಿನಲ್ಲಿ ಭಾಗವಹಿಸಿದ್ದಾರೆ. ಅವರು ಗಿಡ ನೆಟ್ಟುಈ ಅಭಿಯಾನವನ್ನು ಬೆಂಬಲಿಸಿರುವ ಚಿತ್ರ ಟ್ವಿಟರ್ನಲ್ಲಿ ಹರಿದಾಡುತ್ತಿದೆ. ಸಮಂತಾ ಅಕ್ಕಿನೇನಿ ಅವರು ಕೂಡಾ ಈ ಅಭಿಯಾನವನ್ನು ಬೆಂಬಲಿಸಿದ್ದಾರೆ. ಓಹ್ ಬೇಬಿ ಚಿತ್ರದ ಬೆಡಗಿ ಸಮಂತಾ ತನ್ನ ತಂದೆಯ ಜೊತೆಗೂಡಿ ಈ ಅಭಿಯಾನದಲ್ಲಿ ಭಾಗವಹಿಸಿದ್ದಾರೆ.
ನಟಿಯರಾದ ಕೀರ್ತಿ ಸುರೇಶ್, ರಶ್ಮಿಕಾ ಮಂದಣ್ಣ ಮತ್ತು ಶಿಲ್ಪಾ ರೆಡ್ಡಿ ಕೂಡಾ ಭಾಗವಹಿಸಿದ್ದಾರೆ. ಈ ‘ಗ್ರೀನ್ ಇಂಡಿಯಾ ಚಾಲೆಂಜ್ಗೆ’ ನಾಮ ನಿರ್ದೇಶನ ನೀಡುವಲ್ಲಿಯೂ ಇವರು ಭಾಗವಹಿಸಿದ್ದಾರೆ. ಕಲಾವಿದರು, ಚಿತ್ರರಂಗದ ಗಣ್ಯರು ಕೂಡಾ ತಮ್ಮ ಆಪ್ತರನ್ನು ನಾಮನಿರ್ದೇಶನ ಮಾಡಿದರು.
ಆರ್ಆರ್ಆರ್ ಚಿತ್ರದ ನಟ ಪ್ರಭಾಸ್ ಅವರು ಈ ಅಭಿಯಾನದಲ್ಲಿ ಮೂರು ಸಸಿಗಳನ್ನು ನೆಟ್ಟರು. ಎಸ್.ಎಸ್.ರಾಜಮೌಳಿ, ಬಾಲಿವುಡ್ ನಟ ಆಲಿಯಾ ಭಟ್ ಮತ್ತು ಆರ್.ಆರ್.ಆರ್ ಅವರ ತಂಡವನ್ನು ರಾಮಚರಣ್ ಅವರು ನಾಮನಿರ್ದೇಶನ ಮಾಡಿದರು.