ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರೀನ್‌ ಇಂಡಿಯಾ ಸವಾಲಿನಲ್ಲಿ ಸಸಿ ನೆಟ್ಟ ರಾಮ್‌ಚರಣ್‌

Last Updated 8 ನವೆಂಬರ್ 2020, 10:48 IST
ಅಕ್ಷರ ಗಾತ್ರ

ತೆಲುಗು ನಟ ರಾಮಚರಣ್‌‌ ಅವರು ‘ಗ್ರೀನ್‌ ಇಂಡಿಯಾʼ ಸವಾಲಿನಲ್ಲಿ ಭಾಗವಹಿಸಿದ್ದಾರೆ. ಅವರು ಗಿಡ ನೆಟ್ಟುಈ ಅಭಿಯಾನವನ್ನು ಬೆಂಬಲಿಸಿರುವ ಚಿತ್ರ ಟ್ವಿಟರ್‌ನಲ್ಲಿ ಹರಿದಾಡುತ್ತಿದೆ. ಸಮಂತಾ ಅಕ್ಕಿನೇನಿ ಅವರು ಕೂಡಾ ಈ ಅಭಿಯಾನವನ್ನು ಬೆಂಬಲಿಸಿದ್ದಾರೆ. ಓಹ್‌ ಬೇಬಿ ಚಿತ್ರದ ಬೆಡಗಿ ಸಮಂತಾ ತನ್ನ ತಂದೆಯ ಜೊತೆಗೂಡಿ ಈ ಅಭಿಯಾನದಲ್ಲಿ ಭಾಗವಹಿಸಿದ್ದಾರೆ.

ನಟಿಯರಾದ ಕೀರ್ತಿ ಸುರೇಶ್‌, ರಶ್ಮಿಕಾ ಮಂದಣ್ಣ ಮತ್ತು ಶಿಲ್ಪಾ ರೆಡ್ಡಿ ಕೂಡಾ ಭಾಗವಹಿಸಿದ್ದಾರೆ. ಈ ‘ಗ್ರೀನ್‌ ಇಂಡಿಯಾ ಚಾಲೆಂಜ್‌ಗೆ’ ನಾಮ ನಿರ್ದೇಶನ ನೀಡುವಲ್ಲಿಯೂ ಇವರು ಭಾಗವಹಿಸಿದ್ದಾರೆ. ಕಲಾವಿದರು, ಚಿತ್ರರಂಗದ ಗಣ್ಯರು ಕೂಡಾ ತಮ್ಮ ಆಪ್ತರನ್ನು ನಾಮನಿರ್ದೇಶನ ಮಾಡಿದರು.

ಆರ್‌ಆರ್‌ಆರ್ ಚಿತ್ರದ ನಟ ಪ್ರಭಾಸ್ ಅವರು ಈ ಅಭಿಯಾನದಲ್ಲಿ ಮೂರು ಸಸಿಗಳನ್ನು ನೆಟ್ಟರು. ಎಸ್.ಎಸ್.ರಾಜಮೌಳಿ, ಬಾಲಿವುಡ್ ನಟ ಆಲಿಯಾ ಭಟ್ ಮತ್ತು ಆರ್.ಆರ್.ಆರ್ ಅವರ ತಂಡವನ್ನು ರಾಮಚರಣ್ ಅವರು ನಾಮನಿರ್ದೇಶನ ಮಾಡಿದರು.

ತೆಲಂಗಾಣ ಸಂಸದ ಸಂತೋಷ್‌ ಕುಮಾರ್‌ ಅವರು ಈ ಅಭಿಯಾನವನ್ನು ಆರಂಭಿಸಿದ್ದರು. ಪ್ರತಿಯೊಬ್ಬರೂ ಮೂರು ಸಸಿಗಳನ್ನು ನೆಡಬೇಕು ಎಂದು ರಾಮ್‌ಚರಣ್‌ ಕೋರಿದ್ದಾರೆ.

ಇದುವರೆಗೆ ನಾಗಾರ್ಜುನ ಅಕ್ಕಿನೇನಿ, ಸಮಂತಾ, ರಾಶಿ ಖನ್ನಾ ಮತ್ತು ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಈ ಸವಾಲಿನ ಅಭಿಯಾನದಲ್ಲಿ ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT