<p><strong>ನವದೆಹಲಿ:</strong> ತೆಲುಗು ನಟ ರಾಮ್ ಚರಣ್ ತಮ್ಮ ಮುಂಬರುವ ಬಹುನಿರೀಕ್ಷಿತ 'ಪೆದ್ದಿ' ಚಿತ್ರದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆಸಿದ ಸಂಭಾಷಣೆಯನ್ನು ಹಂಚಿಕೊಂಡಿದ್ದಾರೆ. </p><p>ದೆಹಲಿಯಲ್ಲಿ ನಡೆದ ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾರತ, ಕ್ರೀಡೆ ಮತ್ತು ಭಾರತೀಯ ಚಿತ್ರರಂಗದಲ್ಲಿ ಮೂಡಿಬರುತ್ತಿರುವ ವೈವಿಧ್ಯಮಯ ಕಥೆಗಳ ಬಗ್ಗೆ ಪ್ರಧಾನಿ ಅವರೊಂದಿಗೆ ಚರ್ಚಿಸಿರುವುದಾಗಿ ತಿಳಿಸಿದ್ದಾರೆ.</p><p>ಪ್ರಧಾನಿ ಮೋದಿ ಅವರು 'ಪೆದ್ದಿ' ಚಿತ್ರದ ಮುಖ್ಯ ಪರಿಕಲ್ಪನೆಯ ಬಗ್ಗೆ ವಿಶೇಷ ಆಸಕ್ತಿ ತೋರಿಸಿದ್ದರು ಎಂದು ರಾಮ್ ಚರಣ್ ಸ್ಮರಿಸಿದ್ದಾರೆ.</p>.ನಿರೀಕ್ಷೆಗಿಂತ ಕಡಿಮೆ ಮಳೆ: ಬೆಳೆ ಆಯ್ಕೆಯಲ್ಲಿ ಎಚ್ಚರ ವಹಿಸುವಂತೆ ರೈತರಿಗೆ ಸಲಹೆ.ಆಸ್ತಿ ವಿವಾದ: ಕಣ್ಣಿಗೆ ಖಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಕೊಚ್ಚಿ 6 ಜನರ ಕೊಲೆ. <h4><strong>ವಿಕಸಿತ ಭಾರತ ಮತ್ತು ಗ್ರಾಮೀಣ ಸಬಲೀಕರಣವೇ ಚಿತ್ರದ ಜೀವಾಳ</strong></h4><p>ನಾನು ದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾದಾಗ, ಅವರು 'ಪೆದ್ದಿ' ಚಿತ್ರದ ಕಥಾಹಂದರ ಏನೆಂದು ಕೇಳಿದರು. ಅದಕ್ಕೆ ನಾನು, 'ಸರ್, ಇದು ವಿಕಸಿತ ಭಾರತದ ಕನಸು ಮತ್ತು ನಮ್ಮ ಹಳ್ಳಿಗಳ ಸಬಲೀಕರಣದ ಕುರಿತಾದ ಕಥೆ. ಹಳ್ಳಿಗಳನ್ನು ಸಶಕ್ತಗೊಳಿಸುವ ಪರಿಕಲ್ಪನೆಯನ್ನೇ ಈ ಸಿನಿಮಾ ಒಳಗೊಂಡಿದೆ' ಎಂದು ಉತ್ತರಿಸಿದೆ' ಎಂದ ನಟ ರಾಮ್ ಚರಣ್ ವಿವರಿಸಿದ್ದಾರೆ.</p><p><strong>ಪಶ್ಚಿಮ ಬಂಗಾಳದ ಯಶೋಗಾಥೆ ಹಂಚಿಕೊಂಡ ಪ್ರಧಾನಿ</strong></p><p>ರಾಮ್ ಚರಣ್ ಅವರ ಮಾತುಗಳನ್ನು ಕೇಳಿದ ಪ್ರಧಾನಿ ಮೋದಿ, ಕ್ರೀಡೆಯು ಒಂದು ಇಡೀ ಸಮುದಾಯದ ಭವಿಷ್ಯವನ್ನು ಹೇಗೆ ಬದಲಾಯಿಸಬಲ್ಲದು ಎಂಬುದಕ್ಕೆ ಪಶ್ಚಿಮ ಬಂಗಾಳದ ಉದಾಹರಣೆಯೊಂದನ್ನು ಹಂಚಿಕೊಂಡಿದ್ದರು.</p><p>ದಶಕಗಳ ಹಿಂದೆ ಪಶ್ಚಿಮ ಬಂಗಾಳದ ಸಣ್ಣ ಹಳ್ಳಿಯೊಂದರ ಫುಟ್ಬಾಲ್ ಆಟಗಾರ ಭಾರತವನ್ನು ಪ್ರತಿನಿಧಿಸಿದ್ದರು. ಅವರ ಸ್ಫೂರ್ತಿಯಿಂದಾಗಿ ಇಂದು ಅದೇ ಹಳ್ಳಿಯ 85ಕ್ಕೂ ಹೆಚ್ಚು ಯುವಕರು ಫುಟ್ಬಾಲ್ ಆಡುತ್ತಿದ್ದಾರೆ ಎಂಬ ಸ್ಪೂರ್ತಿದಾಯಕ ಕಥೆಯನ್ನು ಮೋದಿ ನನಗೆ ತಿಳಿಸಿದರು ಎಂದು<strong> </strong>ರಾಮ್ ಚರಣ್ ಹೇಳಿದ್ದಾರೆ.</p>.ವಂದೇ ಮಾತರಂ ಪೂರ್ಣ ಹಾಡುವುದು ಕಡ್ಡಾಯವಲ್ಲ: ಕೇರಳಂ ಸಿಎಂ ಸತೀಶನ್.ಮಾಸ್ ಲೀಡರ್ ಸಿದ್ದರಾಮಯ್ಯ, ಬಂಡೆ ಡಿಕೆಶಿ ಕುರಿತು ಓದಬೇಕಾದ ಸುದ್ದಿಗಳಿವು... <p>ರಾಮ್ ಚರಣ್ ಅವರು ಕಳೆದ ವರ್ಷ ತಮ್ಮ ಪತ್ನಿ ಉಪಾಸನಾ ಅವರೊಂದಿಗೆ ದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದರು.</p><h4><strong>ಸಿನಿಮಾಗಳಲ್ಲಿ ಹೆಚ್ಚುತ್ತಿದೆ ಗ್ರಾಮೀಣ ಸೊಗಡು</strong></h4><p>ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತದ ಸಿನಿಮಾಗಳು ಹಳ್ಳಿ ಸಂಸ್ಕೃತಿಗೆ ಹತ್ತಿರವಾಗಿರುತ್ತಿವೆ ಎಂದು ರಾಮ್ ಚರಣ್ ಅಭಿಪ್ರಾಯಪಟ್ಟಿದ್ದಾರೆ.</p><p>ಪೆದ್ದಿ ಚಿತ್ರಕ್ಕೆ ಬುಚ್ಚಿ ಬಾಬು ಸನಾ ಆ್ಯಕ್ಷನ್ ಕಟ್ ಹೇಳಿದ್ದಾರೆ. ರಾಮ್ ಚರಣ್ ಜತೆ ನಾಯಕಿ ಆಗಿ ಜಾಹ್ನವಿ ಕಪೂರ್ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಶಿವರಾಜ್ಕುಮಾರ್, ದಿವ್ಯೇಂದು ಶರ್ಮಾ ಮತ್ತು ಜಗಪತಿ ಬಾಬು ಸಹ ನಟಿಸಿದ್ದಾರೆ. ಈ ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತವಿದೆ. ಈ ಚಿತ್ರ ಜೂನ್ 4ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.</p>.VIDEO: ಆಟೊ ಚಾಲಕರ ಸಮವಸ್ತ್ರ ಧರಿಸಿ ಸಂವಾದ ನಡೆಸಿದ ರಾಹುಲ್ ಗಾಂಧಿ.ನೀಟ್-UG ಪತ್ರಿಕೆ ಸೋರಿಕೆ: ಯುವಕರನ್ನು ನಿರಾಶೆಗೊಳಿಸಬಾರದು,NTAಗೆ ಸುಪ್ರೀಂ ತರಾಟೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ತೆಲುಗು ನಟ ರಾಮ್ ಚರಣ್ ತಮ್ಮ ಮುಂಬರುವ ಬಹುನಿರೀಕ್ಷಿತ 'ಪೆದ್ದಿ' ಚಿತ್ರದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆಸಿದ ಸಂಭಾಷಣೆಯನ್ನು ಹಂಚಿಕೊಂಡಿದ್ದಾರೆ. </p><p>ದೆಹಲಿಯಲ್ಲಿ ನಡೆದ ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾರತ, ಕ್ರೀಡೆ ಮತ್ತು ಭಾರತೀಯ ಚಿತ್ರರಂಗದಲ್ಲಿ ಮೂಡಿಬರುತ್ತಿರುವ ವೈವಿಧ್ಯಮಯ ಕಥೆಗಳ ಬಗ್ಗೆ ಪ್ರಧಾನಿ ಅವರೊಂದಿಗೆ ಚರ್ಚಿಸಿರುವುದಾಗಿ ತಿಳಿಸಿದ್ದಾರೆ.</p><p>ಪ್ರಧಾನಿ ಮೋದಿ ಅವರು 'ಪೆದ್ದಿ' ಚಿತ್ರದ ಮುಖ್ಯ ಪರಿಕಲ್ಪನೆಯ ಬಗ್ಗೆ ವಿಶೇಷ ಆಸಕ್ತಿ ತೋರಿಸಿದ್ದರು ಎಂದು ರಾಮ್ ಚರಣ್ ಸ್ಮರಿಸಿದ್ದಾರೆ.</p>.ನಿರೀಕ್ಷೆಗಿಂತ ಕಡಿಮೆ ಮಳೆ: ಬೆಳೆ ಆಯ್ಕೆಯಲ್ಲಿ ಎಚ್ಚರ ವಹಿಸುವಂತೆ ರೈತರಿಗೆ ಸಲಹೆ.ಆಸ್ತಿ ವಿವಾದ: ಕಣ್ಣಿಗೆ ಖಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಕೊಚ್ಚಿ 6 ಜನರ ಕೊಲೆ. <h4><strong>ವಿಕಸಿತ ಭಾರತ ಮತ್ತು ಗ್ರಾಮೀಣ ಸಬಲೀಕರಣವೇ ಚಿತ್ರದ ಜೀವಾಳ</strong></h4><p>ನಾನು ದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾದಾಗ, ಅವರು 'ಪೆದ್ದಿ' ಚಿತ್ರದ ಕಥಾಹಂದರ ಏನೆಂದು ಕೇಳಿದರು. ಅದಕ್ಕೆ ನಾನು, 'ಸರ್, ಇದು ವಿಕಸಿತ ಭಾರತದ ಕನಸು ಮತ್ತು ನಮ್ಮ ಹಳ್ಳಿಗಳ ಸಬಲೀಕರಣದ ಕುರಿತಾದ ಕಥೆ. ಹಳ್ಳಿಗಳನ್ನು ಸಶಕ್ತಗೊಳಿಸುವ ಪರಿಕಲ್ಪನೆಯನ್ನೇ ಈ ಸಿನಿಮಾ ಒಳಗೊಂಡಿದೆ' ಎಂದು ಉತ್ತರಿಸಿದೆ' ಎಂದ ನಟ ರಾಮ್ ಚರಣ್ ವಿವರಿಸಿದ್ದಾರೆ.</p><p><strong>ಪಶ್ಚಿಮ ಬಂಗಾಳದ ಯಶೋಗಾಥೆ ಹಂಚಿಕೊಂಡ ಪ್ರಧಾನಿ</strong></p><p>ರಾಮ್ ಚರಣ್ ಅವರ ಮಾತುಗಳನ್ನು ಕೇಳಿದ ಪ್ರಧಾನಿ ಮೋದಿ, ಕ್ರೀಡೆಯು ಒಂದು ಇಡೀ ಸಮುದಾಯದ ಭವಿಷ್ಯವನ್ನು ಹೇಗೆ ಬದಲಾಯಿಸಬಲ್ಲದು ಎಂಬುದಕ್ಕೆ ಪಶ್ಚಿಮ ಬಂಗಾಳದ ಉದಾಹರಣೆಯೊಂದನ್ನು ಹಂಚಿಕೊಂಡಿದ್ದರು.</p><p>ದಶಕಗಳ ಹಿಂದೆ ಪಶ್ಚಿಮ ಬಂಗಾಳದ ಸಣ್ಣ ಹಳ್ಳಿಯೊಂದರ ಫುಟ್ಬಾಲ್ ಆಟಗಾರ ಭಾರತವನ್ನು ಪ್ರತಿನಿಧಿಸಿದ್ದರು. ಅವರ ಸ್ಫೂರ್ತಿಯಿಂದಾಗಿ ಇಂದು ಅದೇ ಹಳ್ಳಿಯ 85ಕ್ಕೂ ಹೆಚ್ಚು ಯುವಕರು ಫುಟ್ಬಾಲ್ ಆಡುತ್ತಿದ್ದಾರೆ ಎಂಬ ಸ್ಪೂರ್ತಿದಾಯಕ ಕಥೆಯನ್ನು ಮೋದಿ ನನಗೆ ತಿಳಿಸಿದರು ಎಂದು<strong> </strong>ರಾಮ್ ಚರಣ್ ಹೇಳಿದ್ದಾರೆ.</p>.ವಂದೇ ಮಾತರಂ ಪೂರ್ಣ ಹಾಡುವುದು ಕಡ್ಡಾಯವಲ್ಲ: ಕೇರಳಂ ಸಿಎಂ ಸತೀಶನ್.ಮಾಸ್ ಲೀಡರ್ ಸಿದ್ದರಾಮಯ್ಯ, ಬಂಡೆ ಡಿಕೆಶಿ ಕುರಿತು ಓದಬೇಕಾದ ಸುದ್ದಿಗಳಿವು... <p>ರಾಮ್ ಚರಣ್ ಅವರು ಕಳೆದ ವರ್ಷ ತಮ್ಮ ಪತ್ನಿ ಉಪಾಸನಾ ಅವರೊಂದಿಗೆ ದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದರು.</p><h4><strong>ಸಿನಿಮಾಗಳಲ್ಲಿ ಹೆಚ್ಚುತ್ತಿದೆ ಗ್ರಾಮೀಣ ಸೊಗಡು</strong></h4><p>ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತದ ಸಿನಿಮಾಗಳು ಹಳ್ಳಿ ಸಂಸ್ಕೃತಿಗೆ ಹತ್ತಿರವಾಗಿರುತ್ತಿವೆ ಎಂದು ರಾಮ್ ಚರಣ್ ಅಭಿಪ್ರಾಯಪಟ್ಟಿದ್ದಾರೆ.</p><p>ಪೆದ್ದಿ ಚಿತ್ರಕ್ಕೆ ಬುಚ್ಚಿ ಬಾಬು ಸನಾ ಆ್ಯಕ್ಷನ್ ಕಟ್ ಹೇಳಿದ್ದಾರೆ. ರಾಮ್ ಚರಣ್ ಜತೆ ನಾಯಕಿ ಆಗಿ ಜಾಹ್ನವಿ ಕಪೂರ್ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಶಿವರಾಜ್ಕುಮಾರ್, ದಿವ್ಯೇಂದು ಶರ್ಮಾ ಮತ್ತು ಜಗಪತಿ ಬಾಬು ಸಹ ನಟಿಸಿದ್ದಾರೆ. ಈ ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತವಿದೆ. ಈ ಚಿತ್ರ ಜೂನ್ 4ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.</p>.VIDEO: ಆಟೊ ಚಾಲಕರ ಸಮವಸ್ತ್ರ ಧರಿಸಿ ಸಂವಾದ ನಡೆಸಿದ ರಾಹುಲ್ ಗಾಂಧಿ.ನೀಟ್-UG ಪತ್ರಿಕೆ ಸೋರಿಕೆ: ಯುವಕರನ್ನು ನಿರಾಶೆಗೊಳಿಸಬಾರದು,NTAಗೆ ಸುಪ್ರೀಂ ತರಾಟೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>