<p>ಬೆಂಗಳೂರಿನಲ್ಲಿ ಟಾಲಿವುಡ್ ನಟ ರಾಮ್ ಚರಣ್ ಹಾಗೂ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಅವರು ಕನ್ನಡದಲ್ಲಿ ಮಾತನಾಡಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. </p><p>ರಾಮ್ಚರಣ್, ಶಿವರಾಜ್ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಪೆದ್ದಿ' ಚಿತ್ರದ ಪ್ರಚಾರ ಆರಂಭಿಸಿಲಾಗಿದೆ. ಈ ನಿಟ್ಟಿನಲ್ಲಿ ಈ ಚಿತ್ರದ ಚಿತ್ರತಂಡ ಮೇ25 ರಂದು ಬೆಂಗಳೂರಿಗೆ ಆಗಮಿಸಿದ್ದರು. </p><p>ಈ ಚಿತ್ರದ ಅಭಿಪ್ರಾಯ ಹಂಚಿಕೊಂಡಿರುವ ನಟ ಶಿವರಾಜ್ ಕುಮಾರ್, ‘ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಗಬೇಕು. ನನ್ನ ತಮ್ಮ ಪುನೀತ್ ಹೇಗೋ ರಾಮ್ ಚರಣ್ ಕೂಡ ಹಾಗೆ’ ಎಂದಿದ್ದಾರೆ. </p><p>‘ಶಿವಣ್ಣನಲ್ಲಿ ತಂದೆ, ಸಹೋದರ, ಗೆಳೆಯ, ಉತ್ತಮ ನಟನನ್ನು ನೋಡಬಹುದು. ಅವರು ಭಾರತೀಯ ಸಿನಿಮಾ ರಂಗಕ್ಕೆ ಶ್ರೇಷ್ಠ ವ್ಯಕ್ತಿ. ಕನ್ನಡ ಚಿತ್ರರಂಗದ ಚಕ್ರವರ್ತಿ. ನೀವು ‘ಪೆದ್ದಿ’ ಚಿತ್ರದಲ್ಲಿ ನಟಿಸಿರುವುದು ನಮ್ಮ ಹೆಮ್ಮೆ‘ ಎಂದು ರಾಮ್ ಚರಣ್ ಹೇಳಿಕೊಂಡಿದ್ದಾರೆ.</p><p>‘ಈ ಸಿನಿಮಾಕ್ಕಾಗಿ ತುಂಬಾ ಕಷ್ಟಪಟ್ಟಿದ್ದೇವೆ. ನನಗೆ ಕನ್ನಡ ಅಷ್ಟು ಗೊತ್ತಿಲ್ಲ. ಆದರೆ ಮುಂದಿನ ಸರಿ ಬೆಂಗಳೂರಿಗೆ ಬಂದಾಗ ಕನ್ನಡದಲ್ಲೇ ಮಾತನಾಡುವೆ’ ಎಂದು ಅವರು ಹೇಳಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. </p><p>ಈ ಚಿತ್ರದ ಪ್ರಚಾರದ ವೇಳೆ ಬಾಲಿವುಡ್ ನಟಿ ಜಾಹ್ನವಿ ಅವರು ‘ನನಗೆ ಶಿವರಾಜ್ ಕುಮಾರ್ ಅವರ ಮುಂದಿನ ಸಿನಿಮಾದಲ್ಲಿ ನಟಿಸುವ ಆಸೆ ಇದೆ. ನಿಮ್ಮನ್ನು ನೋಡಿ ಸಂತೋಷವಾಯಿತು’ ಎಂದಿರುವ ವಿಡಿಯೊಗಳು ಪ್ರೇಕ್ಷಕರ ಗಮನ ಸೆಳೆದಿವೆ.</p><p>ಶಿವರಾಜ್ಕುಮಾರ್ ಅವರು ‘ಗೌರ್ನಾಯ್ಡು’ ಆಗಿ ಹಾಗೂ ರಾಮ್ ಚರಣ್ ಅವರು ‘ಪೈಲ್ವಾನ್‘ ಪಾತ್ರದಲ್ಲಿ ನಟಿಸಿರುವ ಈ ಚಿತ್ರವು ಜೂನ್ 4 ರಂದು ಬಿಡುಗಡೆಯಾಲಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರಿನಲ್ಲಿ ಟಾಲಿವುಡ್ ನಟ ರಾಮ್ ಚರಣ್ ಹಾಗೂ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಅವರು ಕನ್ನಡದಲ್ಲಿ ಮಾತನಾಡಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. </p><p>ರಾಮ್ಚರಣ್, ಶಿವರಾಜ್ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಪೆದ್ದಿ' ಚಿತ್ರದ ಪ್ರಚಾರ ಆರಂಭಿಸಿಲಾಗಿದೆ. ಈ ನಿಟ್ಟಿನಲ್ಲಿ ಈ ಚಿತ್ರದ ಚಿತ್ರತಂಡ ಮೇ25 ರಂದು ಬೆಂಗಳೂರಿಗೆ ಆಗಮಿಸಿದ್ದರು. </p><p>ಈ ಚಿತ್ರದ ಅಭಿಪ್ರಾಯ ಹಂಚಿಕೊಂಡಿರುವ ನಟ ಶಿವರಾಜ್ ಕುಮಾರ್, ‘ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಗಬೇಕು. ನನ್ನ ತಮ್ಮ ಪುನೀತ್ ಹೇಗೋ ರಾಮ್ ಚರಣ್ ಕೂಡ ಹಾಗೆ’ ಎಂದಿದ್ದಾರೆ. </p><p>‘ಶಿವಣ್ಣನಲ್ಲಿ ತಂದೆ, ಸಹೋದರ, ಗೆಳೆಯ, ಉತ್ತಮ ನಟನನ್ನು ನೋಡಬಹುದು. ಅವರು ಭಾರತೀಯ ಸಿನಿಮಾ ರಂಗಕ್ಕೆ ಶ್ರೇಷ್ಠ ವ್ಯಕ್ತಿ. ಕನ್ನಡ ಚಿತ್ರರಂಗದ ಚಕ್ರವರ್ತಿ. ನೀವು ‘ಪೆದ್ದಿ’ ಚಿತ್ರದಲ್ಲಿ ನಟಿಸಿರುವುದು ನಮ್ಮ ಹೆಮ್ಮೆ‘ ಎಂದು ರಾಮ್ ಚರಣ್ ಹೇಳಿಕೊಂಡಿದ್ದಾರೆ.</p><p>‘ಈ ಸಿನಿಮಾಕ್ಕಾಗಿ ತುಂಬಾ ಕಷ್ಟಪಟ್ಟಿದ್ದೇವೆ. ನನಗೆ ಕನ್ನಡ ಅಷ್ಟು ಗೊತ್ತಿಲ್ಲ. ಆದರೆ ಮುಂದಿನ ಸರಿ ಬೆಂಗಳೂರಿಗೆ ಬಂದಾಗ ಕನ್ನಡದಲ್ಲೇ ಮಾತನಾಡುವೆ’ ಎಂದು ಅವರು ಹೇಳಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. </p><p>ಈ ಚಿತ್ರದ ಪ್ರಚಾರದ ವೇಳೆ ಬಾಲಿವುಡ್ ನಟಿ ಜಾಹ್ನವಿ ಅವರು ‘ನನಗೆ ಶಿವರಾಜ್ ಕುಮಾರ್ ಅವರ ಮುಂದಿನ ಸಿನಿಮಾದಲ್ಲಿ ನಟಿಸುವ ಆಸೆ ಇದೆ. ನಿಮ್ಮನ್ನು ನೋಡಿ ಸಂತೋಷವಾಯಿತು’ ಎಂದಿರುವ ವಿಡಿಯೊಗಳು ಪ್ರೇಕ್ಷಕರ ಗಮನ ಸೆಳೆದಿವೆ.</p><p>ಶಿವರಾಜ್ಕುಮಾರ್ ಅವರು ‘ಗೌರ್ನಾಯ್ಡು’ ಆಗಿ ಹಾಗೂ ರಾಮ್ ಚರಣ್ ಅವರು ‘ಪೈಲ್ವಾನ್‘ ಪಾತ್ರದಲ್ಲಿ ನಟಿಸಿರುವ ಈ ಚಿತ್ರವು ಜೂನ್ 4 ರಂದು ಬಿಡುಗಡೆಯಾಲಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>