<p>ಖ್ಯಾತ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಅವರು ‘ಧುರಂಧರ್ 2’ ಸಿನಿಮಾವನ್ನು ಈವರೆಗಿನ ಅತ್ಯುತ್ತಮ ಚಿತ್ರವೆಂದು ಶ್ಲಾಘಿಸಿದ್ದರು. ಇದೀಗ ಮೊದಲ ಬಾರಿಗೆ ಸಿನಿಮಾದಲ್ಲಿನ ಪಾತ್ರವೊಂದರ ಬಗ್ಗೆ ಮಾತನಾಡಿದ್ದಾರೆ.</p><p>ಆದಿತ್ಯ ಧರ್ ನಿರ್ದೇಶನದ ರಣವೀರ್ ಸಿಂಗ್ ನಟನೆಯ ಧುರಂಧರ್ 2 ಸಿನಿಮಾ ಎಲ್ಲಾ ದಾಖಲೆಗಳನ್ನು ಮುರಿದಿದೆ. ಭಾರತೀಯ ಸಿನಿಮಾವೊಂದು ₹3 ಸಾವಿರ ಕೋಟಿ ಗಳಿಸಿದ ಸಾಧನೆ ಮಾಡಿದೆ. ಸಿನಿಮಾದಲ್ಲಿ ದಾವೂದ್ ಇಬ್ರಾಹಿಂ ಪಾತ್ರವು ಅಷ್ಟು ಚೆನ್ನಾಗಿ ಮೂಡಿಬಂದಿಲ್ಲ ಎಂದು ಆರ್ಜಿವಿ ಹೇಳಿದ್ದಾರೆ.</p><p>ಹುಸೇನ್ ಜೈದಿ ಅವರೊಂದಿಗಿನ ಸಂವಾದದಲ್ಲಿ ಮಾತನಾಡಿರುವ ಆರ್ಜಿವಿ, ‘ಧುರಂಧರ್ 2 ಸಿನಿಮಾದಲ್ಲಿ ನಾನು ಒಪ್ಪದ ಏಕೈಕ ಅಂಶವೆಂದರೆ, ಅದು ದಾವೂದ್ ಇಬ್ರಾಹಿಂನ ಪಾತ್ರ. ಸಿನಿಮಾದಲ್ಲಿ ಅವನ ಪಾತ್ರ ಸರಿಯಾಗಿ ಮೂಡಿಬಂದಿಲ್ಲ ಎಂದು ನಾನು ಭಾವಿಸುತ್ತೇನೆ’ ಎಂದಿದ್ದಾರೆ.</p><p>ಸಿನಿಮಾದಲ್ಲಿ ’ದಾವೂದ್ ಪಾತ್ರವನ್ನು ಬಡ ಸಾಹೇಬ್ ಎಂದು ಉಲ್ಲೇಖಿಸಲಾಗಿದೆ. ಆದರೆ ಅವನು ಕುಖ್ಯಾತ ದರೋಡೆ ಕೋರನಾಗಿದ್ದನು. ಭಾರತದಲ್ಲಿ ಭಯೋತ್ಪಾದಕ ಕಾರ್ಯಾಚರಣೆಗಳನ್ನು ಆಯೋಜಿಸುವ ಮಾಸ್ಟರ್ ಮೈಂಡ್ ಕೂಡ ಆಗಿದ್ದನು. ಆದರೆ ಈ ಎರಡು ಅಂಶಗಳು ಸರಿಯಾಗಿ ಹೋಲಿಕೆಯಾಗುತ್ತಿಲ್ಲ‘ ಎಂದು ಹೇಳಿದ್ದಾರೆ. </p><p>‘ಧುರಂಧರ್ 2 ಸಿನಿಮಾ ಅದ್ಭುತವಾಗಿದೆ. ಆದರೆ ದಾವೂದ್ ಪಾತ್ರದ ನಿರ್ವಹಣೆಯಲ್ಲಿ ಆಧಿತ್ಯ ಧರ್ ಎಡವಿದ್ದಾರೆ’ ಎಂದು ಸಂವಾದದಲ್ಲಿ ಹೇಳಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಖ್ಯಾತ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಅವರು ‘ಧುರಂಧರ್ 2’ ಸಿನಿಮಾವನ್ನು ಈವರೆಗಿನ ಅತ್ಯುತ್ತಮ ಚಿತ್ರವೆಂದು ಶ್ಲಾಘಿಸಿದ್ದರು. ಇದೀಗ ಮೊದಲ ಬಾರಿಗೆ ಸಿನಿಮಾದಲ್ಲಿನ ಪಾತ್ರವೊಂದರ ಬಗ್ಗೆ ಮಾತನಾಡಿದ್ದಾರೆ.</p><p>ಆದಿತ್ಯ ಧರ್ ನಿರ್ದೇಶನದ ರಣವೀರ್ ಸಿಂಗ್ ನಟನೆಯ ಧುರಂಧರ್ 2 ಸಿನಿಮಾ ಎಲ್ಲಾ ದಾಖಲೆಗಳನ್ನು ಮುರಿದಿದೆ. ಭಾರತೀಯ ಸಿನಿಮಾವೊಂದು ₹3 ಸಾವಿರ ಕೋಟಿ ಗಳಿಸಿದ ಸಾಧನೆ ಮಾಡಿದೆ. ಸಿನಿಮಾದಲ್ಲಿ ದಾವೂದ್ ಇಬ್ರಾಹಿಂ ಪಾತ್ರವು ಅಷ್ಟು ಚೆನ್ನಾಗಿ ಮೂಡಿಬಂದಿಲ್ಲ ಎಂದು ಆರ್ಜಿವಿ ಹೇಳಿದ್ದಾರೆ.</p><p>ಹುಸೇನ್ ಜೈದಿ ಅವರೊಂದಿಗಿನ ಸಂವಾದದಲ್ಲಿ ಮಾತನಾಡಿರುವ ಆರ್ಜಿವಿ, ‘ಧುರಂಧರ್ 2 ಸಿನಿಮಾದಲ್ಲಿ ನಾನು ಒಪ್ಪದ ಏಕೈಕ ಅಂಶವೆಂದರೆ, ಅದು ದಾವೂದ್ ಇಬ್ರಾಹಿಂನ ಪಾತ್ರ. ಸಿನಿಮಾದಲ್ಲಿ ಅವನ ಪಾತ್ರ ಸರಿಯಾಗಿ ಮೂಡಿಬಂದಿಲ್ಲ ಎಂದು ನಾನು ಭಾವಿಸುತ್ತೇನೆ’ ಎಂದಿದ್ದಾರೆ.</p><p>ಸಿನಿಮಾದಲ್ಲಿ ’ದಾವೂದ್ ಪಾತ್ರವನ್ನು ಬಡ ಸಾಹೇಬ್ ಎಂದು ಉಲ್ಲೇಖಿಸಲಾಗಿದೆ. ಆದರೆ ಅವನು ಕುಖ್ಯಾತ ದರೋಡೆ ಕೋರನಾಗಿದ್ದನು. ಭಾರತದಲ್ಲಿ ಭಯೋತ್ಪಾದಕ ಕಾರ್ಯಾಚರಣೆಗಳನ್ನು ಆಯೋಜಿಸುವ ಮಾಸ್ಟರ್ ಮೈಂಡ್ ಕೂಡ ಆಗಿದ್ದನು. ಆದರೆ ಈ ಎರಡು ಅಂಶಗಳು ಸರಿಯಾಗಿ ಹೋಲಿಕೆಯಾಗುತ್ತಿಲ್ಲ‘ ಎಂದು ಹೇಳಿದ್ದಾರೆ. </p><p>‘ಧುರಂಧರ್ 2 ಸಿನಿಮಾ ಅದ್ಭುತವಾಗಿದೆ. ಆದರೆ ದಾವೂದ್ ಪಾತ್ರದ ನಿರ್ವಹಣೆಯಲ್ಲಿ ಆಧಿತ್ಯ ಧರ್ ಎಡವಿದ್ದಾರೆ’ ಎಂದು ಸಂವಾದದಲ್ಲಿ ಹೇಳಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>