ಸತ್ಯದೇವ್, ಜಾಕ್ವೆಲಿನ್ ಫರ್ನಾಂಡೀಸ್, ನುಸ್ರತ್ ಭರುಚ ಮೊದಲಾದವರು ಚಿತ್ರದಲ್ಲಿದ್ದಾರೆ. ಅಕ್ಷಯ್ ಕುಮಾರ್ ಪುರಾತತ್ವ ಶಾಸ್ತ್ರಜ್ಞರಾಗಿ ಪಾತ್ರ ನಿರ್ವಹಿಸಿದ್ದಾರೆ. ಹನುಮಂತ ಸೀತೆಯನ್ನು ಕರೆತರಲು ಲಂಕೆಗೆ ಹೊರಟ ರಾಮನಿಗಾಗಿ ಕಲ್ಲುಗಳಿಂದ ಸೇತುವೆ ನಿರ್ಮಿಸಿದ್ದ ಎಂಬ ಕಥೆಯಿದೆ. ಭಾರತ–ಶ್ರೀಲಂಕಾ ನಡುವಿನ ಸಮುದ್ರದಲ್ಲಿ ಈ ಸೇತುವೆ ಇತ್ತು ಎಂಬುದಕ್ಕೆ ಒಂದಷ್ಟು ಪುರಾವೆಗಳು ದೊರಕಿವೆ ಎಂದು ಈ ಹಿಂದೆ ಸುದ್ದಿಯಾಗಿತ್ತು. ಅಕ್ಷಯ್ಕುಮಾರ್ ಅದೇ ಸಮುದ್ರದೊಳಗೆ ಇಳಿದು ಕಲ್ಲೊಂದನ್ನು ಎತ್ತಿಕೊಂಡು ಬಂದು ಅಂತ್ಯದಲ್ಲಿ ರಾಮಸೇತು ನಿಜವೆಂಬುದು ಸಾರುತ್ತಾರೆ.