ಚಂದನವನದ ಖ್ಯಾತ ನಟ, ನಿರ್ದೇಶಕ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಅವರ ವಿವಾಹ ಕಾರ್ಯಕ್ರಮ ಇಂದು ಬೆಂಗಳೂರಿನ ಖಾಸಗಿ ರೆಸಾರ್ಟ್ವೊಂದರಲ್ಲಿ ನಡೆಯಿತು.
ಬನ್ನೇರುಘಟ್ಟದ ರೆಸಾರ್ಟ್ನಲ್ಲಿ ನಡೆದ ನಿಹಾರಿಕಾ ಹಾಗೂ ಅಕ್ಷಯ್ ಮದುವೆಯಲ್ಲಿ ಕುಟುಂಬದ ಆಪ್ತರಷ್ಟೇ ಭಾಗವಹಿಸಿದ್ದರು. ನಿಹಾರಿಕಾ–ಅಕ್ಷಯ್ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕುಟುಂಬದವರ ಒಪ್ಪಿಗೆ ಪಡೆದು ಮದುವೆ ಮಾಡಿಕೊಂಡಿದ್ದಾರೆ.
ಕೊರೊನಾ ಸೋಂಕಿನ ಹಾವಳಿ ಇನ್ನೂ ಕಡಿಮೆ ಆಗದ ಕಾರಣ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವುದು ಕಷ್ಟಸಾಧ್ಯವಾಗಿದೆ. ಆ ಕಾರಣಕ್ಕೆ ಕೋವಿಡ್–19 ನಿಯಮಗಳ ಅನುಸಾರ ವಧು ಹಾಗೂ ವರನ ಕುಟುಂಬದವರಷ್ಟೇ ಮದುವೆಯಲ್ಲಿ ಉಪಸ್ಥಿತರಿದ್ದರು.
ಜನವರಿ 16ರಂದು ಆರತಕ್ಷತೆ ಕಾರ್ಯಕ್ರಮ ನಡೆಸಲು ರಮೇಶ್ ಅರವಿಂದ್ ಕುಟುಂಬದವರು ಯೋಚಿಸಿದ್ದಾರೆ. ಅಂದು ಕನ್ನಡ ಚಿತ್ರರಂಗ ಸೇರಿದಂತೆ ದಕ್ಷಿಣಭಾರತ ಚಿತ್ರರಂಗದ ಖ್ಯಾತರು ಆಗಮಿಸುವ ಸಾಧ್ಯತೆ ಇದೆ.