ಬ್ರಹ್ಮಾಸ್ತ್ರ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಾಯಕ ನಟ ರಣಬೀರ್ ಕಪೂರ್ ತಂದೆ ರಿಷಿ ಕಪೂರ್ ಅವರನ್ನು ನೆನೆದು ಭಾವುಕರಾಗಿದ್ದಾರೆ.
ಬುಧವಾರ ನಡೆದ ಬ್ರಹ್ಮಾಸ್ತ್ರ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು. ಈ ವೇಳೆ ಚಿತ್ರದ ಬಗ್ಗೆ ಮಾತನಾಡುತ್ತ ತಂದೆ ರಿಷಿ ಕಪೂರ್ ಅವರನ್ನು ನೆನೆದು ಭಾವುಕರಾದರು.
ತಂದೆಯವರು ಬ್ರಹ್ಮಾಸ್ತ್ರ ಸಿನಿಮಾದ ಬಗ್ಗೆ ಹಾಗೂ ಈ ಚಿತ್ರದ ನಿರ್ದೇಶಕ ಆಯಾನ್ ಮುಖರ್ಜಿ ಬಗ್ಗೆಯೂ ಕೇಳುತ್ತಿದ್ದರು. ಆದರೆ ಅವರು ಬ್ರಹ್ಮಾಸ್ತ್ರ ನೋಡಲು ಇಲ್ಲ ಎಂದು ಭಾವುಕರಾದರು.
ರಣಬೀರ್ ಜೊತೆ ಆಲಿಯಾ ಭಟ್ ಕೂಡ ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿಭಾಗವಹಿಸಿದ್ದರು. ಬಾಲಿವುಡ್ನ ಪ್ರಣಯ ಪಕ್ಷಿಗಳು ಎಂದೇ ಗುರುತಿಸಿಕೊಂಡಿರುವ ರಣಬೀರ್ ಮತ್ತು ಆಲಿಯಾ ಬ್ರಹ್ಮಾಸ್ತ ಸಿನಿಮಾದದಲ್ಲಿ ನಾಯಕ, ನಾಯಕಿಯಾಗಿ ನಟಿಸುತ್ತಿದ್ದಾರೆ.