ಅಲ್ಲದೇ, ಸುಕುಮಾರ್ ನಿರ್ದೇಶನದ ಅಲ್ಲು ಅರ್ಜುನ್ ನಾಯಕರಾಗಿರುವ ತೆಲುಗಿನ ಹೊಸ ಚಿತ್ರಕ್ಕೂ ರಶ್ಮಿಕಾ ಅವರೇ ಹೀರೊಯಿನ್. ‘ರಂಗಸ್ಥಳಂ’ ಬಳಿಕ ಅವರು ಯಾವುದೇ ಚಿತ್ರ ನಿರ್ದೇಶಿಸಿಲ್ಲ. ಹಾಗಾಗಿ, ಈ ಸಿನಿಮಾದ ಮೇಲೆ ನಿರೀಕ್ಷೆಗಳು ಗರಿಗೆದರಿವೆ. ಇತ್ತೀಚೆಗೆ ಸುಕುಮಾರ್ ಅವರು ರಶ್ಮಿಕಾ ಅವರ ಟೆಸ್ಟ್ ಶೂಟ್ ನಡೆಸಿದ್ದಾರಂತೆ. ಆಂಧ್ರಪ್ರದೇಶದ ಚಿತ್ತೂರು ಅರಣ್ಯದಲ್ಲಿ ರಕ್ತಚಂದನದ ಕಳ್ಳಸಾಗಾಣಿಕೆ ಅವ್ಯಾಹತವಾಗಿದೆ. ಇದರ ಸುತ್ತವೇ ಈ ಚಿತ್ರದ ಕಥೆ ಹೆಣೆಯಲಾಗಿದೆಯಂತೆ. ಇದರಲ್ಲಿ ಚಿತ್ತೂರು ಹುಡುಗಿಯಾಗಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ.