<p>ರಿಯಲ್ ಸ್ಟಾರ್ ಉಪೇಂದ್ರ ಅವರು ಇತ್ತೀಚೆಗೆ ತಾನೆ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ನಲ್ಲಿ ಇರಾನ್–ಇಸ್ರೇಲ್ ಯುದ್ಧದ ಸಂದರ್ಭದಲ್ಲಿ ಉಂಟಾಗಿದ್ದ ಎಲ್ಪಿಜಿ ಸಿಲಿಂಡರ್ ಕೊರತೆಯ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದರು. ಇದರಿಂದ ಅಭಿಮಾನಿಗಳು ಗೊಂದಲಕ್ಕೀಡಾಗಿದ್ದರು. ಇದೀಗ ಮತ್ತೊಮ್ಮೆ ಅಂತಹದ್ದೇ ಪೋಸ್ಟ್ ಹಂಚಿಕೊಂಡಿದ್ದಾರೆ.</p><p>ಜನರ ಬದ್ದಿವಂತಿಕೆಯನ್ನು ಪರೀಕ್ಷಿಸುವ ಉಪೇಂದ್ರ ಅವರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ನಲ್ಲಿ ‘ಏಪ್ರಿಲ್ 1ರಂದು ಈ ಬಾರಿ ನಿಜವಾಗಿಯೂ ನಿಮ್ಮೊಂದಿಗೆ ಸರಿಯಾದ ಲಿಂಕ್ ಅನ್ನು ಶೇರ್ ಮಾಡುತ್ತಿದ್ದೇನೆ. ಇದು ಮೂರ್ಖರ ದಿನ ಎಂದು ಕನ್ಫೋಸ್ ಆಗಬೇಡಿ’ ಎಂದು ಬರೆದಿದ್ದಾರೆ.</p>.<p>ಕೆಲ ದಿನಗಳ ಹಿಂದೆ ಸಿಲಿಂಡರ್ ಅಭಾವದ ಕುರಿತು ಉಪೇಂದ್ರ ಅವರು ಪೋಸ್ಟ್ ಹಂಚಿಕೊಂಡಿದ್ದರು. ಅದರಲ್ಲಿ ‘ಈ ಗ್ಯಾಸ್ ಸಿಲಿಂಡರ್ ಸಮಸ್ಯೆಗೂ ನನಗೂ ಲಿಂಕ್ ಇಲ್ಲ, ಅದಕ್ಕೆ ಲಿಂಕ್ ಅಲ್ಲೆಲ್ಲೋ ನಡೀತಿರೋ ಯುದ್ಧ. ಆದರೂ ನನಗ್ಯಾಕೆ ಗುರೂ ಈ ಗ್ಯಾಸ್ ಟ್ರಬಲ್ ? ಹಾಗೆ ನಾನ್ ಮುಂದೆ ಹಾಕೋ ಲಿಂಕ್ಗೂ ನಿಮಗೂ ಲಿಂಕ್ ಇಲ್ಲ. ಆದ್ರೂ ಲಿಂಕ್ ಹಾಕ್ತೀನಿ ಯಾವಾಗ? ಕ್ಲಿಕ್ ಮಾಡ್ಬೇಡಿ..! ಕೇಳಲೂ ಬೇಡಿ ನನಗ್ಯಾಕೆ ಈ ಟ್ರಬಲ್’ ಎಂದು ಬರೆದಿದ್ದರು.</p><p>ಒಟ್ಟಾರೆ ಉಪೇಂದ್ರ ಅವರು ತಮ್ಮ ವಿಚಾರಗಳ ಮೂಲಕ ಆಗಾಗ ಜನರ ಬುದ್ದಿವಂತಿಕೆಯನ್ನು ಪರೀಕ್ಷಿಸುತ್ತಾರೆ. ಇವರು ಉತ್ತಮ ನಟ ಹಾಗೂ ನಿರ್ದೇಶಕರಾಗಿಯೂ ಹೆಸರು ಮಾಡಿದ್ದಾರೆ.</p><p>ಸದ್ಯ ಈ ಪೋಸ್ಟ್ಗೆ ಅಭಿಮಾನಿಗಳು ಕಮೆಂಟ್ ಮೂಲಕ ಉತ್ತರಿಸಿದ್ದಾರೆ. ಬಳಕೆದಾರರೊಬ್ಬರು ‘ನೀವು ಮಾತಾಡೋ ಯಾವುದೇ ವಿಷಯ ನಮಿಗೆ ಯಾರ್ಗೂ ಅರ್ಥ ಆಗಲ್ಲ, ಅಕಸ್ಮಾತ್ ಅರ್ಥ ಆದ್ರೂ ಅದ್ನ ಪಕ್ಕದಲ್ಲಿ ಇರೋನಿಗೆ ಹೇಳಲ್ಲ ಯಾಕಂದ್ರೆ ಅವ್ನ ಕಂಡ್ರೆ ಇವನಿಗೆ ಆಗಲ್ಲ, ಇವನ ಕಂಡ್ರೆ ಅವನಿಗೆ ಆಗಲ್ಲ ನಿಮಗಳಿಗೆ ಯಾರಿಗ್ ಕಂಡ್ರು ಯಾರ್ಗೂ ಆಗಲ್ಲ ಒಟ್ಟಿನಲ್ಲಿ ನೀವು ಯಾರು ಉದ್ದಾರ ಆಗಲ್ಲ’ ಎಂದು ಬರೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಿಯಲ್ ಸ್ಟಾರ್ ಉಪೇಂದ್ರ ಅವರು ಇತ್ತೀಚೆಗೆ ತಾನೆ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ನಲ್ಲಿ ಇರಾನ್–ಇಸ್ರೇಲ್ ಯುದ್ಧದ ಸಂದರ್ಭದಲ್ಲಿ ಉಂಟಾಗಿದ್ದ ಎಲ್ಪಿಜಿ ಸಿಲಿಂಡರ್ ಕೊರತೆಯ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದರು. ಇದರಿಂದ ಅಭಿಮಾನಿಗಳು ಗೊಂದಲಕ್ಕೀಡಾಗಿದ್ದರು. ಇದೀಗ ಮತ್ತೊಮ್ಮೆ ಅಂತಹದ್ದೇ ಪೋಸ್ಟ್ ಹಂಚಿಕೊಂಡಿದ್ದಾರೆ.</p><p>ಜನರ ಬದ್ದಿವಂತಿಕೆಯನ್ನು ಪರೀಕ್ಷಿಸುವ ಉಪೇಂದ್ರ ಅವರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ನಲ್ಲಿ ‘ಏಪ್ರಿಲ್ 1ರಂದು ಈ ಬಾರಿ ನಿಜವಾಗಿಯೂ ನಿಮ್ಮೊಂದಿಗೆ ಸರಿಯಾದ ಲಿಂಕ್ ಅನ್ನು ಶೇರ್ ಮಾಡುತ್ತಿದ್ದೇನೆ. ಇದು ಮೂರ್ಖರ ದಿನ ಎಂದು ಕನ್ಫೋಸ್ ಆಗಬೇಡಿ’ ಎಂದು ಬರೆದಿದ್ದಾರೆ.</p>.<p>ಕೆಲ ದಿನಗಳ ಹಿಂದೆ ಸಿಲಿಂಡರ್ ಅಭಾವದ ಕುರಿತು ಉಪೇಂದ್ರ ಅವರು ಪೋಸ್ಟ್ ಹಂಚಿಕೊಂಡಿದ್ದರು. ಅದರಲ್ಲಿ ‘ಈ ಗ್ಯಾಸ್ ಸಿಲಿಂಡರ್ ಸಮಸ್ಯೆಗೂ ನನಗೂ ಲಿಂಕ್ ಇಲ್ಲ, ಅದಕ್ಕೆ ಲಿಂಕ್ ಅಲ್ಲೆಲ್ಲೋ ನಡೀತಿರೋ ಯುದ್ಧ. ಆದರೂ ನನಗ್ಯಾಕೆ ಗುರೂ ಈ ಗ್ಯಾಸ್ ಟ್ರಬಲ್ ? ಹಾಗೆ ನಾನ್ ಮುಂದೆ ಹಾಕೋ ಲಿಂಕ್ಗೂ ನಿಮಗೂ ಲಿಂಕ್ ಇಲ್ಲ. ಆದ್ರೂ ಲಿಂಕ್ ಹಾಕ್ತೀನಿ ಯಾವಾಗ? ಕ್ಲಿಕ್ ಮಾಡ್ಬೇಡಿ..! ಕೇಳಲೂ ಬೇಡಿ ನನಗ್ಯಾಕೆ ಈ ಟ್ರಬಲ್’ ಎಂದು ಬರೆದಿದ್ದರು.</p><p>ಒಟ್ಟಾರೆ ಉಪೇಂದ್ರ ಅವರು ತಮ್ಮ ವಿಚಾರಗಳ ಮೂಲಕ ಆಗಾಗ ಜನರ ಬುದ್ದಿವಂತಿಕೆಯನ್ನು ಪರೀಕ್ಷಿಸುತ್ತಾರೆ. ಇವರು ಉತ್ತಮ ನಟ ಹಾಗೂ ನಿರ್ದೇಶಕರಾಗಿಯೂ ಹೆಸರು ಮಾಡಿದ್ದಾರೆ.</p><p>ಸದ್ಯ ಈ ಪೋಸ್ಟ್ಗೆ ಅಭಿಮಾನಿಗಳು ಕಮೆಂಟ್ ಮೂಲಕ ಉತ್ತರಿಸಿದ್ದಾರೆ. ಬಳಕೆದಾರರೊಬ್ಬರು ‘ನೀವು ಮಾತಾಡೋ ಯಾವುದೇ ವಿಷಯ ನಮಿಗೆ ಯಾರ್ಗೂ ಅರ್ಥ ಆಗಲ್ಲ, ಅಕಸ್ಮಾತ್ ಅರ್ಥ ಆದ್ರೂ ಅದ್ನ ಪಕ್ಕದಲ್ಲಿ ಇರೋನಿಗೆ ಹೇಳಲ್ಲ ಯಾಕಂದ್ರೆ ಅವ್ನ ಕಂಡ್ರೆ ಇವನಿಗೆ ಆಗಲ್ಲ, ಇವನ ಕಂಡ್ರೆ ಅವನಿಗೆ ಆಗಲ್ಲ ನಿಮಗಳಿಗೆ ಯಾರಿಗ್ ಕಂಡ್ರು ಯಾರ್ಗೂ ಆಗಲ್ಲ ಒಟ್ಟಿನಲ್ಲಿ ನೀವು ಯಾರು ಉದ್ದಾರ ಆಗಲ್ಲ’ ಎಂದು ಬರೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>