<p>‘ಕಾಂತಾರ–ಒಂದು ದಂತಕಥೆ ಅಧ್ಯಾಯ ಒಂದು’ ಬಳಿಕ ರಿಷಬ್ ಶೆಟ್ಟಿ ಸದ್ಯ ಪ್ರಶಾಂತ್ ವರ್ಮಾ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ‘ಜೈ ಹನುಮಾನ್’ನಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ಇತ್ತೀಚೆಗೆ ರಿಷಬ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ ಒಂದು ಪೋಸ್ಟ್ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.</p>.<p>‘ಅಧ್ಯಾಯ ಎರಡು–ಇಲ್ಲಿಂದ ಶುರು’ ಎಂಬ ಪೋಸ್ಟ್ ಸದ್ಯ ಚರ್ಚೆಯಲ್ಲಿದೆ. ಇದು ‘ಕಾಂತಾರ–ಅಧ್ಯಾಯ ಎರಡು’ ಇರಬಹುದೇ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ ಪೋಸ್ಟ್ನಲ್ಲಿ ಮೊದಲೆರಡು ಸರಣಿಯನ್ನು ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್ ಉಲ್ಲೇಖವಿಲ್ಲ. ಬದಲಾಗಿ ರಿಷಬ್ ಅವರ ‘ರಿಷಬ್ ಶೆಟ್ಟಿ ಫಿಲ್ಮ್ಸ್’ನ ಲಾಂಛನ ಹಾಕಲಾಗಿದೆ.</p>.<p>ಇತ್ತೀಚೆಗೆ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ‘ನನ್ನ ನಿರ್ಮಾಣ ಸಂಸ್ಥೆಯಡಿ ‘ಸರ್ಕಾರಿ ಹಿ.ಪ್ರಾ .ಶಾಲೆ ಕಾಸರಗೋಡು’ ಆದ ಮೇಲೆ ನನ್ನದೇ ಸಿನಿಮಾ ಬಂದಿಲ್ಲ. ಬೇರೆಯವರ ಸಿನಿಮಾ ನಿರ್ಮಾಣ ಮಾಡಿದ್ದೆ. ಈ ಸಂಸ್ಥೆಯನ್ನು ಮತ್ತಷ್ಟು ಬೆಳೆಸಬೇಕಾಗಿದೆ. ‘ಜೈ ಹನುಮಾನ್’ನಲ್ಲಿ ‘ರಿಷಬ್ ಶೆಟ್ಟಿ ಫಿಲ್ಮ್ಸ್’ ಕೂಡಾ ನಿರ್ಮಾಣದಲ್ಲಿ ಕೈಜೋಡಿಸಿದೆ. ಈ ಸಂಸ್ಥೆಯ ಬಗ್ಗೆ ನನ್ನೊಳಗೊಂದಿಷ್ಟು ಕನಸುಗಳು ಇವೆ. ಈ ಬಗ್ಗೆ ಕೂತೂಹಲಕಾರಿ ಬೆಳವಣಿಗೆಗಳು ಆಗುತ್ತಿವೆ’ ಎಂದಿದ್ದರು. ಹೀಗಾಗಿ ರಿಷಬ್ ಅವರ ನಿರ್ಮಾಣ ಸಂಸ್ಥೆಯ ಹೊಸ ಅಧ್ಯಾಯ ಇರಬಹುದು ಎನ್ನುವ ಚರ್ಚೆಯೂ ನಡೆಯುತ್ತಿದೆ. ಈ ಬಗ್ಗೆ ರಿಷಬ್ ಅವರು ಪ್ರತಿಕ್ರಿಯೆ ನೀಡಿಲ್ಲ.v</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260327-51-1312322944</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಕಾಂತಾರ–ಒಂದು ದಂತಕಥೆ ಅಧ್ಯಾಯ ಒಂದು’ ಬಳಿಕ ರಿಷಬ್ ಶೆಟ್ಟಿ ಸದ್ಯ ಪ್ರಶಾಂತ್ ವರ್ಮಾ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ‘ಜೈ ಹನುಮಾನ್’ನಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ಇತ್ತೀಚೆಗೆ ರಿಷಬ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ ಒಂದು ಪೋಸ್ಟ್ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.</p>.<p>‘ಅಧ್ಯಾಯ ಎರಡು–ಇಲ್ಲಿಂದ ಶುರು’ ಎಂಬ ಪೋಸ್ಟ್ ಸದ್ಯ ಚರ್ಚೆಯಲ್ಲಿದೆ. ಇದು ‘ಕಾಂತಾರ–ಅಧ್ಯಾಯ ಎರಡು’ ಇರಬಹುದೇ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ ಪೋಸ್ಟ್ನಲ್ಲಿ ಮೊದಲೆರಡು ಸರಣಿಯನ್ನು ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್ ಉಲ್ಲೇಖವಿಲ್ಲ. ಬದಲಾಗಿ ರಿಷಬ್ ಅವರ ‘ರಿಷಬ್ ಶೆಟ್ಟಿ ಫಿಲ್ಮ್ಸ್’ನ ಲಾಂಛನ ಹಾಕಲಾಗಿದೆ.</p>.<p>ಇತ್ತೀಚೆಗೆ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ‘ನನ್ನ ನಿರ್ಮಾಣ ಸಂಸ್ಥೆಯಡಿ ‘ಸರ್ಕಾರಿ ಹಿ.ಪ್ರಾ .ಶಾಲೆ ಕಾಸರಗೋಡು’ ಆದ ಮೇಲೆ ನನ್ನದೇ ಸಿನಿಮಾ ಬಂದಿಲ್ಲ. ಬೇರೆಯವರ ಸಿನಿಮಾ ನಿರ್ಮಾಣ ಮಾಡಿದ್ದೆ. ಈ ಸಂಸ್ಥೆಯನ್ನು ಮತ್ತಷ್ಟು ಬೆಳೆಸಬೇಕಾಗಿದೆ. ‘ಜೈ ಹನುಮಾನ್’ನಲ್ಲಿ ‘ರಿಷಬ್ ಶೆಟ್ಟಿ ಫಿಲ್ಮ್ಸ್’ ಕೂಡಾ ನಿರ್ಮಾಣದಲ್ಲಿ ಕೈಜೋಡಿಸಿದೆ. ಈ ಸಂಸ್ಥೆಯ ಬಗ್ಗೆ ನನ್ನೊಳಗೊಂದಿಷ್ಟು ಕನಸುಗಳು ಇವೆ. ಈ ಬಗ್ಗೆ ಕೂತೂಹಲಕಾರಿ ಬೆಳವಣಿಗೆಗಳು ಆಗುತ್ತಿವೆ’ ಎಂದಿದ್ದರು. ಹೀಗಾಗಿ ರಿಷಬ್ ಅವರ ನಿರ್ಮಾಣ ಸಂಸ್ಥೆಯ ಹೊಸ ಅಧ್ಯಾಯ ಇರಬಹುದು ಎನ್ನುವ ಚರ್ಚೆಯೂ ನಡೆಯುತ್ತಿದೆ. ಈ ಬಗ್ಗೆ ರಿಷಬ್ ಅವರು ಪ್ರತಿಕ್ರಿಯೆ ನೀಡಿಲ್ಲ.v</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260327-51-1312322944</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>