ಕಳೆದ ವರ್ಷ ಲಾಕ್ಡೌನ್ ಸಂದರ್ಭದಲ್ಲಿಯೂ ಅನೇಕ ನಿರಾಶ್ರಿತರಿಗೆ ಆಹಾರ ಸರಬರಾಜು ಮಾಡುವ ಮೂಲಕ ರೂಪೇಶ್ ಶೆಟ್ಟಿ ನೆರವಾಗಿದ್ದರು. ಈ ಬಾರಿ ಸಂಕಷ್ಟದಲ್ಲಿರುವ ಕುಟುಂಬದ ಸದಸ್ಯರು ತಮ್ಮ ತಂಡಕ್ಕೆ ಕರೆ ಮಾಡಿದರೆ, ಅವರಿಗೆ ಅಗತ್ಯವಿರುವ ಆಹಾರ ಸಾಮಾಗ್ರಿಗಳ ರೇಷನ್ ಕಿಟ್ ಹಾಗೂ ತರಕಾರಿ ಕಿಟ್ಗಳನ್ನು ಅವರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ಮಂಗಳೂರಿನ ಕಾವೂರು, ಕೋಡಿಕಲ್, ಬೋಳೂರು, ಉರ್ವ, ಬಜಾಲ್, ಜಲ್ಲಿಗುಡ್ಡೆ, ಫೈಸಲ್ನಗರ, ಸುರತ್ಕಲ್, ಕೊಡಿಯಾಲ್ ಬೈಲ್, ಕುದ್ರೋಳಿ, ಮಂಗಳಾದೇವಿ ಸೇರಿದಂತೆ ನಗರದಾದ್ಯಂತ ಸುಮಾರು ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಸಹಾಯ ಹಸ್ತ ಚಾಚಿದ್ದಾರೆ. ಇವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗಿದೆ.