ಶಾ ಸಭೆಗೆ ಬಂದ ಕರಡಿ ಸಂಗಣ್ಣ: ವಿಧಾನಸಭೆ ಟಿಕೆಟ್ಗಾಗಿ ಮುನಿಸಿಕೊಂಡಿದ್ದ ಸಂಸದ ಕರಡಿ ಸಂಗಣ್ಣ ಅವರನ್ನು ಅಮಿತ್ ಶಾ ಸಭೆಗೆ ಕರೆಸಿಕೊಂಡರು. ಸಂಸದರ ಪೈಕಿ ಯಡಿಯೂರಪ್ಪ, ಶ್ರೀರಾಮುಲು ಅವರಿಗೆ ಈಗಾಗಲೇ ಟಿಕೆಟ್ ಘೋಷಿಸಲಾಗಿದೆ. ಶೋಭಾ ಅವರಿಗೂ ಟಿಕೆಟ್ ಸಿಗುವ ಸಾಧ್ಯತೆ ಇದೆ. ತಮಗೆ ಏಕೆ ಟಿಕೆಟ್ ನೀಡುವುದಿಲ್ಲ ಎಂಬುದಾಗಿ ಪ್ರಶ್ನಿಸಿದರು. ಕೊಪ್ಪಳ ವಿಧಾನಸಭೆಗೆ ಟಿಕೆಟ್ ನೀಡುವ ಬಗ್ಗೆ ಶಾ ಚರ್ಚೆ ನಡೆಸಿದರೆಂದು ಮೂಲಗಳು ಹೇಳಿವೆ.