ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲವಾಡ ನರಸಿಂಹ ರೆಡ್ಡಿ ಪಾತ್ರಕ್ಕೆ ಚಿರಂಜೀವಿ ಜೀವ ತುಂಬಲಿದ್ದು, ಚಿತ್ರತಂಡ ಈಗಾಗಲೇ ಬಿಡುಗಡೆ ಮಾಡಿರುವ ಪೋಸ್ಟರ್ ಚಿರು ಅಭಿಮಾನಿಗಳಲ್ಲಿ ಅಪಾರ ಕುತೂಹಲ ಮೂಡಿಸಿದೆ. ಸೋಸಾಯಿ ವೆಂಕಣ್ಣನಾಗಿ ಅಮಿತಾಭ್ ಬಚ್ಚನ್, ಅವುಕು ರಾಜನಾಗಿ ಸುದೀಪ್, ಓಬಯ್ಯನಾಗಿ ವಿಜಯ್ ಸೇತುಪತಿ, ಮೈರಾ ರೆಡ್ಡಿಯಾಗಿ ಜಗಪತಿ ಬಾಬು, ಸಿದ್ದಮ್ಮ ಪಾತ್ರದಲ್ಲಿ ನಯನತಾರಾ ಮತ್ತು ಲಕ್ಷ್ಮಿ ಪಾತ್ರದಲ್ಲಿ ತಮನ್ನಾ ಭಾಟಿಯಾ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದುದ್ದಕ್ಕೂ ನಟ ಅಲ್ಲು ಅರ್ಜುನ್ ನಿರೂಪಣೆ ಇರುವುದು ವಿಶೇಷ.