ದ್ವಾರಕೀಶ್ ಭಾರತೀಯ ಚಿತ್ರರಂಗ ಕಂಡ ಅಪರೂಪದ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಎನಿಸಿದ್ದಾರೆ. ಈ ದಿನ ಅವರಿಗೆ 78ನೇ ಜನ್ಮ ದಿನದ ಸಂಭ್ರಮ.ಸ್ಯಾಂಡಲ್ವುಡ್ ಚಿತ್ರಗಳಲ್ಲಿ ನಟನಾಗಿ ಹಾಸ್ಯದ ಹೊನಲು ಹರಿಸಿದ ಈ ‘ಪ್ರಚಂಡ ಕುಳ್ಳ’ ಅಭಿಮಾನಿಗಳ ಹೃದಯದಲ್ಲಿ ಕಾಯಂ ಸ್ಥಾನ ಪಡೆದುಕೊಂಡಿದ್ದಾರೆ.
ಕನ್ನಡ ಸಿನಿಪ್ರಿಯರ ಹೃದಯ ಗೆದ್ದ ಈ ಪ್ರಚಂಡ ಕುಳ್ಳನಿಗೆ ಚಿತ್ರರಂಗದ ಪ್ರಮುಖರು ಮತ್ತು ರಾಜಕಾರಣಿಗಳು ಜನ್ಮದಿನದ ಶುಭಾಶಯ ಹೇಳಿದ್ದಾರೆ. ಈ ಹಿರಿಯ ನಟನಿಗೆ ತಮ್ಮ ಮೊಮ್ಮಗಳು ಅಂದರೆ, ತಮ್ಮ ನಾಲ್ಕನೇ ಪುತ್ರ ಸುಖೀಶ್ ಅವರ ಪುತ್ರಿ ದೀಕ್ಷಾ ಜತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಡಬಲ್ ಖುಷಿ ಅವರದು. ಧೀಕ್ಷಾ ಹುಟ್ಟಿರುವುದು ದ್ವಾರಕೀಶ್ ಜನ್ಮದಿನದಂದೇ.
ಕನ್ನಡ ಚಿತ್ರರಂಗದ ಅನೇಕ ಮೈಲುಗಲ್ಲುಗಳಿಗೆ ಸಾಕ್ಷಿಯಾಗಿರುವ ಹಿರಿಯ ನಟ, ನಿರ್ದೇಶಕ ಮತ್ತು ನಿರ್ಮಾಪಕರಾದ ಶ್ರೀ ದ್ವಾರಕೀಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
— B Sriramulu (@sriramulubjp) August 19, 2020
ಕನ್ನಡ ಚಿತ್ರರಂಗಕ್ಕೆ ತಮ್ಮ ಅನುಪಮ ಸೇವೆ ಹೀಗೇ ಮುಂದುವರಿಯಲಿ. ದೇವರು ನಿಮಗೆ ಇನ್ನೂ ಹೆಚ್ಚು ಆಯುರಾರೋಗ್ಯ ಕೊಟ್ಟು ಹರಸಲಿ ಎಂದು ಹಾರೈಸುತ್ತೇನೆ.#hbddwarakish pic.twitter.com/ti8fEIXj0e
ದ್ವಾರಕೀಶ್ ನಟನೆಯ ಜತೆಗೆಇದುವರೆಗೆ ತಮ್ಮ ಚಿತ್ರ ನಿರ್ಮಾಣ ಸಂಸ್ಥೆಯಿಂದ 52 ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳದಲ್ಲೂ ಚಿತ್ರ ನಿರ್ಮಿಸಿದ ಹೆಗ್ಗಳಿಕೆ ಇವರದು. ಅಲ್ಲದೆ, 19 ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಶಿವರಾಜ್ಕುಮಾರ್ ಮತ್ತು ರಚಿತಾ ರಾಮ್ ನಟಿಸಿದ ‘ಆಯುಷ್ಮಾನ್’ ಚಿತ್ರಕ್ಕೆ ದ್ವಾರಕೀಶ್ ಮತ್ತು ಅವರ ಪುತ್ರ ಯೋಗಿ ದ್ವಾರಕೀಶ್ ಬಂಡವಾಳ ಹೂಡಿದ್ದರು. ಈ ಚಿತ್ರದ ಹಂಚಿಕೆ ವಿಚಾರವಾಗಿ ಸಿನಿಮಾ ವಿತರಕ ಜಯಣ್ಣ ಜತೆಗೆ ವಿವಾದ ಉಂಟಾಗಿ, ದ್ವಾರಕೀಶ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಿನಿಮಾ ನಂತರ ಮತ್ಯಾವುದೇ ಚಿತ್ರಗಳನ್ನು ದ್ವಾರಕೀಶ್ ಕೈಗೆತ್ತಿಕೊಂಡಂತಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.