‘ದೂರುದಾರ ವ್ಯಾಪಾರಿ, ಕೆಲಸ ನಿಮಿತ್ತ ಕಾರಿನಲ್ಲಿ ಬೆಂಗಳೂರಿಗೆ ಏಪ್ರಿಲ್ 20ರಂದು ಬಂದಿದ್ದರು. ಕೆಲಸ ಮುಗಿಸಿಕೊಂಡು ರಾತ್ರಿ ಕಾರಿನಲ್ಲಿ ಮಂಡ್ಯಕ್ಕೆ ಹೊರಟಿದ್ದರು. ಶಿವಾನಂದ ವೃತ್ತದ ಬಳಿ ಕಾರು ಅಡ್ಡಗಟ್ಟಿದ್ದ ಆರೋಪಿಗಳು, ಅಪಘಾತದ ನೆಪದಲ್ಲಿ ಜಗಳ ಮಾಡಿದ್ದರು. ನಂತರ, ತಮ್ಮ ಕಾರಿನಲ್ಲಿ ವ್ಯಾಪಾರಿಯನ್ನು ಅಪಹರಿಸಿದ್ದರು.’