ಚಿತ್ರ ಇದೇ ತಿಂಗಳು ತೆರೆ ಕಾಣುವ ಸಾಧ್ಯತೆ ಇದೆ. ಹಾಗಾಗಿ ಚಿತ್ರದ ಪ್ರಚಾರ ಆರಂಭವಾಗಿದೆ. ಶಾಲಿನಿ ಎಂ. ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರಚನೆ, ನಿರ್ದೇಶನ ಹಾಗೂ ಪ್ರಮುಖ ಪಾತ್ರದಲ್ಲಿ ಭರತ್ನಂದ ಇದ್ದಾರೆ.ಅಡುಗೆಗೆ ಉಪ್ಪು ಎಷ್ಟು ಮುಖ್ಯವೋ, ಜೀವನದಲ್ಲಿ ಸಾಲ್ಟ್ ಅವಶ್ಯಕವೆಂದು ಸಾರುವ ಕತೆ ಇದು. ಚೇತನ್ಕುಮಾರ್, ಚಂದ್ರು ಛತ್ರಪತಿ, ಸತೀಶ್ಮಳವಳ್ಳಿ ನಾಯಕರಿದ್ದಾರೆ. ತಾರಾಗಣದಲ್ಲಿ ಬಾಲರಾಜ್ವಾಡಿ, ಸಂದೀಪ್, ವಿಜಯಶ್ರೀ ಕಲಬುರಗಿ, ಯಶಸ್ವಿನಿಶೆಟ್ಟಿ, ರಶ್ಮಿತಗೌಡ, ಸೂರ್ಯೋದಯ್ ಪೆರಂಪಳ್ಳಿ, ಚಕ್ರವರ್ತಿ ದಾವಣಗೆರೆ, ಹರ್ಷ ಇದ್ದಾರೆ.