ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ಅವರು, ಶಿವಮೊಗ್ಗಕ್ಕೆ ಶುಕ್ರವಾರ ಸಂಜೆಯೇ ಬಂದಿದ್ದ ಅವರು ಶನಿವಾರ ಜಲಾಶಯ ವೀಕ್ಷಿಸಿದರು. ಭದ್ರಾ ಅಭಯಾರಣ್ಯದಲ್ಲಿ ಕೆಲವು ಸಮಯ ಸಫಾರಿ ಹೋಗಿದ್ದರು. ವನ್ಯಜೀವಿಗಳ ಅಪರೂಪದ ಚಿತ್ರಗಳನ್ನು ಕ್ಲಿಕ್ಕಿಸಿದರು. ಅವರಿಗೆ ಮತ್ತೊಬ್ಬ ನಟ ಚಿಕ್ಕಣ್ಣ ಸಾಥ್ ನೀಡಿದರು. ನಂತರ ಅರಣ್ಯದಲ್ಲಿರುವ ಬ್ರಿಟಿಷರ ಕಾಲದ ನಿರೀಕ್ಷಣಾ ಮಂದಿರದಲ್ಲಿ ತಂಗಿದರು.