ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾ ಜಲಾಶಯ ವೀಕ್ಷಿಸಿದ ನಟ ದರ್ಶನ್

Last Updated 8 ಆಗಸ್ಟ್ 2020, 14:40 IST
ಅಕ್ಷರ ಗಾತ್ರ

ಶಿವಮೊಗ್ಗ/ಭದ್ರಾವತಿ: ನಟ ದರ್ಶನ್ ಶನಿವಾರ ಭದ್ರಾ ಜಲಾಶಯಕ್ಕೆ ಭೇಟಿ ನೀಡಿದ್ದರು. ಎರಡು ದಿನ ಅವರು ಅಲ್ಲೇ ವಾಸ್ತವ್ಯ ಮಾಡುವರು.

ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ಅವರು, ಶಿವಮೊಗ್ಗಕ್ಕೆ ಶುಕ್ರವಾರ ಸಂಜೆಯೇ ಬಂದಿದ್ದ ಅವರು ಶನಿವಾರ ಜಲಾಶಯ ವೀಕ್ಷಿಸಿದರು. ಭದ್ರಾ ಅಭಯಾರಣ್ಯದಲ್ಲಿ ಕೆಲವು ಸಮಯ ಸಫಾರಿ ಹೋಗಿದ್ದರು. ವನ್ಯಜೀವಿಗಳ ಅಪರೂಪದ ಚಿತ್ರಗಳನ್ನು ಕ್ಲಿಕ್ಕಿಸಿದರು. ಅವರಿಗೆ ಮತ್ತೊಬ್ಬ ನಟ ಚಿಕ್ಕಣ್ಣ ಸಾಥ್ ನೀಡಿದರು. ನಂತರ ಅರಣ್ಯದಲ್ಲಿರುವ ಬ್ರಿಟಿಷರ ಕಾಲದ ನಿರೀಕ್ಷಣಾ ಮಂದಿರದಲ್ಲಿ ತಂಗಿದರು.

ದರ್ಶನ್ ಬಂದಿರುವ ಸುದ್ದಿ ಹರಡುತ್ತಿದ್ದಂತೆ ಜನರು ತಂಡೋಪತಂಡವಾಗಿ ಬಂದು ನೆಚ್ಚಿನ ನಟನ ಜತೆ ಫೋಟೊ ಕ್ಲಿಕ್ಕಿಸಿಕೊಂಡರು. ಹಲವರು ಮಾಸ್ಕ್ ಧರಿಸದೇ ಬಂದದ್ದು ಅವರಿಗೆ ಕಿರಿಕಿರಿ ಉಂಟು ಮಾಡಿತು. ನಂತರ ಪೊಲೀಸರು ಬಂದೋಬಸ್ತ್ ಕಲ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT