ದಕ್ಷಿಣ ಭಾರತದಲ್ಲಿ ಹಿಟ್ ಆಗಿದ್ದ ‘ಅರ್ಜುನ್ ರೆಡ್ಡಿ’ ಸಿನಿಮಾ ಬಾಲಿವುಡ್ನಲ್ಲಿ ‘ಕಬೀರ್ ಸಿಂಗ್’ ಹೆಸರಿನಲ್ಲಿ ಬಿಡುಗಡೆಯಾಗಿ, ಉತ್ತರ ಭಾರತದ ಪ್ರೇಕ್ಷಕರ ಮನ ಗೆದ್ದಿತ್ತು. ಈ ಎರಡೂ ಸಿನಿಮಾಗಳನ್ನು ಸಂದೀಪ್ ನಿರ್ದೇಶಿಸಿದ್ದರು. ಶಾಹಿದ್ ಕಪೂರ್, ಕಿಯಾರಾ ಅಡ್ವಾಣಿ ನಟನೆಗೂ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿತ್ತು. ಈ ಸಿನಿಮಾದ ಯಶಸ್ಸಿನಿಂದ ಸಾಕಷ್ಟು ದಕ್ಷಿಣ ಭಾರತದ ಪ್ರತಿಭೆಗಳಿಗೆ ಬಾಲಿವುಡ್ನಿಂದ ಕರೆ ಬಂದಿತ್ತು.