ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್‌ 2: ಮೈಸೂರಲ್ಲಿ ‘ಅಧೀರ’ ಪಾತ್ರದ ಚಿತ್ರೀಕರಣ?

Last Updated 19 ಆಗಸ್ಟ್ 2019, 10:00 IST
ಅಕ್ಷರ ಗಾತ್ರ

‘ಕೆಜಿಎಫ್‌ ಚಾಪ್ಟರ್‌ 2’ ಚಿತ್ರದ ಶೂಟಿಂಗ್‌ ಬಿಡುವಿಲ್ಲದೆ ನಡೆಯುತ್ತಿದೆ. ಚಿತ್ರೀಕರಣ ಯಾವ ಹಂತದಲ್ಲಿದೆ ಎಂಬ ಸುಳಿವನ್ನು ನಿರ್ದೇಶಕ ಪ್ರಶಾಂತ್‌ ನೀಲ್‌ ನೇತೃತ್ವದ ಚಿತ್ರತಂಡ ಎಲ್ಲಿಯೂ ಬಿಟ್ಟುಕೊಡದೆ ಎಚ್ಚರಿಕೆವಹಿಸಿದೆ. ‌

ಈ ನಡುವೆಯೇ ಬಾಲಿವುಡ್‌ ನಟ ಸಂಜಯ್‌ ದತ್ ‘ಅಧೀರ’ನಾಗಿ ಇದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಜನ್ಮ ದಿನದಂದು ಈ ಕುರಿತು ಬಿಡುಗಡೆಗೊಳಿಸಿದ ಪೋಸ್ಟರ್‌ ವೈರಲ್‌ ಆಗಿತ್ತು. ಈಗ ಮೈಸೂರಿನ ಲಲಿತ ಮಹಲ್‌ ಪ್ಯಾಲೇಸ್ ಹೋಟೆಲ್‌ನಲ್ಲಿ ಒಂದು ವಾರದ ಕಾಲ ಮುನ್ನಾಭಾಯ್‌ ಅವರ ‘ಅಧೀರ’ ಪಾತ್ರದ ಶೂಟಿಂಗ್‌ ನಡೆಯಲಿದೆ ಎಂಬ ಸುದ್ದಿ ಹೊರಬಿದ್ದಿದೆ. ಶೀಘ್ರವೇ, ಸಂಜಯ್‌ ದತ್ ಅವರು ಕೆಜಿಎಫ್‌ ತಂಡವನ್ನು ಸೇರಿಕೊಳ್ಳಲಿದ್ದಾರೆ ಎನ್ನುತ್ತವೆ ಮೂಲಗಳು.

ತಮಿಳು ನಟ ಸರಣ್‌ ಶಕ್ತಿ ಕೂಡ ‘ಕೆಜಿಎಫ್‌ ಚಾಪ್ಟರ್‌ 2’ಗೆ ಎಂಟ್ರಿ ಕೊಟ್ಟಿದ್ದಾರೆ. ಇದರಲ್ಲಿ ರಾಕಿ ಬಾಯ್‌(ಯಶ್‌)ನ ಹದಿಹರೆಯದ ಕಥೆಯೂ ಇದೆಯಂತೆ. ಆ ಪಾತ್ರದಲ್ಲಿ ಸರಣ್‌ ಕಾಣಿಸಿಕೊಳ್ಳಲಿದ್ದಾರೆ. ‘ವಡಾ ಚೆನ್ನೈ’ ಮತ್ತು ‘ಸಗಾ’ ಸಿನಿಮಾದಲ್ಲಿ ಅವರು ನಟಿಸಿದ್ದು, ವಿಭಿನ್ನ ಅಭಿನಯದ ಮೂಲಕ ಸಿನಿ ಪ್ರೇಕ್ಷಕರ ಮನ ಗೆದ್ದಿದ್ದಾರೆ ಸರಣ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT