ಇದರಲ್ಲಿ ಶಿವರಾಜ್ಕುಮಾರ್ ಅವರ ಪಾತ್ರದ ಹೆಸರು ‘ಬೈರತಿ ರಣಗಲ್ಲು’. ಜಿಡ್ಡುಗಟ್ಟಿದ ಅಧಿಕಾರಶಾಹಿ ವ್ಯವಸ್ಥೆ ವಿರುದ್ಧ ಬೈರತಿಗೆ ಕಡುಕೋಪ. ಆತ ಸತ್ಯಕ್ಕಾಗಿ ಹೋರಾಡುವ ರಾಕ್ಷಸ. ತಪ್ಪು ಮಾಡಿದವರನ್ನು ಆತ ಎಂದಿಗೂ ಕ್ಷಮಿಸುವುದಿಲ್ಲ. ಆತನದು ತಣ್ಣನೆಯ ಕ್ರೌರ್ಯ. ಆದರೆ, ರಾಮಾಯಣ ಓದಿಕೊಂಡಿರುವ ಮೇಧಾವಿ. ಅಕ್ರಮಗಣಿಗಾರಿಕೆ ಹಾಗೂ ಹವಾಲ ದಂಧೆಯಲ್ಲಿ ಬೈರತಿಯದ್ದು ಎತ್ತಿದ ಕೈ. ಮತ್ತೊಂದೆಡೆ ಆತ ಜನಾನುರಾಗಿ. ಬೈರತಿ ರಣಗಲ್ಲು ಪಾತ್ರದಲ್ಲಿನ ಶಿವರಾಜ್ಕುಮಾರ್ ಅವರ ನಟನೆಗೆ ಜನರು ಫಿದಾ ಆಗಿದ್ದರು.