<p>ಶಿವರಾಜ್ಕುಮಾರ್ ಅವರು ಮುಖ್ಯಭೂಮಿಕೆಯಲ್ಲಿರುವ ‘ಬೇಲ್’ ಸಿನಿಮಾದ ಚಿತ್ರೀಕರಣ ಇತ್ತೀಚೆಗೆ ಪೂರ್ಣಗೊಂಡಿದೆ. ‘ಗೂಗ್ಲಿ’, ‘ರಣವಿಕ್ರಮ’, ‘ನಟಸಾರ್ವಭೌಮ’, ‘ರೇಮೋ’ ಸೇರಿದಂತೆ ಹಲವು ಹಿಟ್ಗಳನ್ನು ಕೊಟ್ಟಿರುವ ನಿರ್ದೇಶಕ ಪವನ್ ಒಡೆಯರ್ ನಿರ್ದೇಶನದ ಈ ಸಿನಿಮಾ ಇದೇ ವರ್ಷ ತೆರೆಗೆ ಬರಲಿದೆ. ಸಿನಿಮಾದ ಫಸ್ಟ್ಲುಕ್ ಮೇ 16ಕ್ಕೆ ರಿಲೀಸ್ ಆಗಲಿದ್ದು, ಈ ಹೊಸ್ತಿಲಲ್ಲಿ ಪವನ್ ಮಾತಿಗೆ ಸಿಕ್ಕರು.</p>.<p>‘ಇತ್ತೀಚೆಗೆ ದೆಹಲಿ ಹಾಗೂ ಧರ್ಮಶಾಲಾ ಸೇರಿದಂತೆ ಉತ್ತರ ಭಾರತದ ಹಲವೆಡೆ ಶೂಟಿಂಗ್ ಪೂರ್ಣಗೊಳಿಸಿ ಮರಳಿದ್ದೇವೆ’ ಎಂದು ಮಾತು ಆರಂಭಿಸಿ ಪವನ್, ‘ನಾನು ಚಿತ್ರರಂಗಕ್ಕೆ ಬಂದು ಸುಮಾರು 16 ವರ್ಷವಾಯಿತು. ಈ ಅವಧಿಯಲ್ಲಿ ಹಾಸ್ಯ ಪ್ರಧಾನ, ಪ್ರೇಮಕಥೆ, ಆ್ಯಕ್ಷನ್ ಹೀಗೆ ಎಲ್ಲಾ ಜಾನರ್ನ ಸಿನಿಮಾಗಳನ್ನು ಮಾಡಿದ್ದೇನೆ. ಈ ಜಾನರ್ಗಳನ್ನು ಮಿಶ್ರಣ ಮಾಡಿ ಒಂದು ಸಿನಿಮಾ ಮಾಡಿದರೆ ಹೇಗಿರುತ್ತದೆ ಎನ್ನುವ ಆಲೋಚನೆ ಮೊದಲಿನಿಂದಲೇ ಇತ್ತು. ಈ ರಸಗಳೆಲ್ಲವನ್ನೂ ಸೇರಿಸಿ ಈ ಸಿನಿಮಾ ಮಾಡಿದ್ದೇನೆ’ ಎಂದರು.</p>.<p>‘ಈ ಚಿತ್ರದ ಚಿತ್ರಕಥೆ ರಚಿಸಲು ಸುಮಾರು ಒಂದೂವರೆ ವರ್ಷಕ್ಕೂ ಅಧಿಕ ಸಮಯ ತೆಗೆದುಕೊಂಡೆ. ಇದೊಂದು ಪಕ್ಕಾ ಕಮರ್ಷಿಯಲ್ ಎಂಟರ್ಟೇನ್ಮೆಂಟ್ ಸಿನಿಮಾ. ಕಥೆಯಲ್ಲಿ ಪಯಣವೂ ಇದೆ. ಕೋರ್ಟ್ ರೂಮ್ ಡ್ರಾಮಾ, ಕೌಟುಂಬಿಕ ಹಾಗೂ ಭಾವನಾತ್ಮಕ ಅಂಶಗಳು, ಸ್ನೇಹ ಹೀಗೆ ಹಲವು ಪದರಗಳು ಕಥೆಯೊಳಗಿವೆ’ ಎಂದರು.</p>.<p>‘ಕಥೆಗೆ ಅಗತ್ಯವಿದ್ದ ಕಾರಣ ಶಿವರಾಜ್ಕುಮಾರ್, ಜಯರಾಮ್, ಸಾಯಿಕುಮಾರ್ ಅವರಂಥ ದಿಗ್ಗಜರನ್ನೇ ಹಾಕಿಕೊಂಡಿದ್ದೇನೆ. ಅವರನ್ನು ಜೊತೆಯಾಗಿ ತೆರೆಯ ಮೇಲೆ ನೋಡುವುದೇ ಖುಷಿ. ಪ್ರಸ್ತುತ ಅಗತ್ಯ ಇದೆಯೋ ಇಲ್ಲವೋ ಪ್ರತಿ ಸಿನಿಮಾದಲ್ಲಿ ಸ್ಟಾರ್ಗಳನ್ನು ಕಥೆಗೆ ತುರುಕುವ ಸ್ಥಿತಿ ಇದೆ. ಆದರೆ ನಾವು ಯಾರನ್ನೂ ಒತ್ತಾಯಪೂರ್ವಕವಾಗಿ ಕಥೆಗೆ ಸೇರಿಸಿಲ್ಲ. ಮಲ್ಟಿಸ್ಟಾರರ್ ಸಿನಿಮಾ ಮಾಡಬೇಕು ಎನ್ನುವ ಹಟದಿಂದ ಹೀಗೆ ಮಾಡಿಲ್ಲ. ಎಲ್ಲರೂ ತಮ್ಮ ಪಾತ್ರಗಳನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ. ಫಸ್ಟ್ಲುಕ್ ಅನ್ನು ಜನರು ಯಾವ ರೀತಿ ಸ್ವೀಕರಿಸುತ್ತಾರೆ ಎನ್ನುವ ಕುತೂಹಲವಿದೆ’ ಎನ್ನುತ್ತಾ ಶೂಟಿಂಗ್ ಅನುಭವಗಳತ್ತ ಮಾತು ಹೊರಳಿಸಿದರು ಪವನ್.</p>.<p><strong>‘ಉತ್ತರ ಭಾರತದ ಶೂಟಿಂಗ್ ಅನುಭವ ಚೆನ್ನಾಗಿತ್ತು</strong></p>.<p>‘ಉತ್ತರ ಭಾರತದ ಶೂಟಿಂಗ್ ಅನುಭವ ಚೆನ್ನಾಗಿತ್ತು. ವಾತಾವರಣವೂ ನಮ್ಮ ಶೂಟಿಂಗ್ಗೆ ಸೂಕ್ತವಾಗಿತ್ತು. ಧರ್ಮಶಾಲಾದಲ್ಲಿ ಟಿಬೆಟಿಯನ್ ಧಾರ್ಮಿಕ ನಾಯಕ ದಲೈಲಾಮಾ ಅವರನ್ನು ಭೇಟಿಯಾಗಿದ್ದೆವು. ಸುಮಾರು 80 ದಿನ ಶೂಟಿಂಗ್ ಮಾಡಿದ್ದೇವೆ. ಶಿವರಾಜ್ಕುಮಾರ್ ಅವರ ಜೊತೆ ಕೆಲಸ ಮಾಡುವುದೇ ಖುಷಿ. ಅವರೊಬ್ಬ ನಿರ್ದೇಶಕರ ನಟ. ಅವರು ನಿರ್ಮಾಪಕರ ದೃಷ್ಟಿಯಿಂದ ಆಲೋಚಿಸುವವರು. ಎಲ್ಲಿ ಖರ್ಚು ಉಳಿಸಬಹುದು ಎಂದು ಯೋಚಿಸುವವರು. ನನ್ನ ಈ ಸಿನಿಪಯಣದಲ್ಲಿ ಇಲ್ಲಿಯವರೆಗೆ ಮಾಡಿದ ಸಿನಿಮಾಗಳು ಒಂದು ಅನುಭವವಾದರೆ, ‘ಬೇಲ್’ ಹೊಸ ಅನುಭವ. ಸಿನಿಮಾದ ಸಣ್ಣಪುಟ್ಟ ಕೆಲಸಗಳು ಬಾಕಿ ಇವೆ. ಟೀಸರ್ನಲ್ಲಿ ಬಿಡುಗಡೆ ದಿನಾಂಕದ ಮಾಹಿತಿ ಹಂಚಿಕೊಳ್ಳುತ್ತೇವೆ. ಇದೇ ವರ್ಷದಲ್ಲೇ ಸಿನಿಮಾ ಬಿಡುಗಡೆ ಮಾಡಲಿದ್ದೇವೆ’ ಎನ್ನುತ್ತಾ ಮಾತಿಗೆ ವಿರಾಮವಿತ್ತರು.</p>.<p>ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ನ ವೆಂಕಟ್ ಕೆ.ನಾರಾಯಣ್ ನಿರ್ಮಾಣ ಮಾಡಿದ್ದಾರೆ. ‘ಸಲಗ’, ‘ಎಕ್ಕ’ ಖ್ಯಾತಿಯ ಸಂಜನಾ ಆನಂದ್, ‘ದಿಯಾ’, ‘ದಸರಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿ ಅವರೂ ತಾರಾಬಳಗದಲ್ಲಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260515-51-371210747</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿವರಾಜ್ಕುಮಾರ್ ಅವರು ಮುಖ್ಯಭೂಮಿಕೆಯಲ್ಲಿರುವ ‘ಬೇಲ್’ ಸಿನಿಮಾದ ಚಿತ್ರೀಕರಣ ಇತ್ತೀಚೆಗೆ ಪೂರ್ಣಗೊಂಡಿದೆ. ‘ಗೂಗ್ಲಿ’, ‘ರಣವಿಕ್ರಮ’, ‘ನಟಸಾರ್ವಭೌಮ’, ‘ರೇಮೋ’ ಸೇರಿದಂತೆ ಹಲವು ಹಿಟ್ಗಳನ್ನು ಕೊಟ್ಟಿರುವ ನಿರ್ದೇಶಕ ಪವನ್ ಒಡೆಯರ್ ನಿರ್ದೇಶನದ ಈ ಸಿನಿಮಾ ಇದೇ ವರ್ಷ ತೆರೆಗೆ ಬರಲಿದೆ. ಸಿನಿಮಾದ ಫಸ್ಟ್ಲುಕ್ ಮೇ 16ಕ್ಕೆ ರಿಲೀಸ್ ಆಗಲಿದ್ದು, ಈ ಹೊಸ್ತಿಲಲ್ಲಿ ಪವನ್ ಮಾತಿಗೆ ಸಿಕ್ಕರು.</p>.<p>‘ಇತ್ತೀಚೆಗೆ ದೆಹಲಿ ಹಾಗೂ ಧರ್ಮಶಾಲಾ ಸೇರಿದಂತೆ ಉತ್ತರ ಭಾರತದ ಹಲವೆಡೆ ಶೂಟಿಂಗ್ ಪೂರ್ಣಗೊಳಿಸಿ ಮರಳಿದ್ದೇವೆ’ ಎಂದು ಮಾತು ಆರಂಭಿಸಿ ಪವನ್, ‘ನಾನು ಚಿತ್ರರಂಗಕ್ಕೆ ಬಂದು ಸುಮಾರು 16 ವರ್ಷವಾಯಿತು. ಈ ಅವಧಿಯಲ್ಲಿ ಹಾಸ್ಯ ಪ್ರಧಾನ, ಪ್ರೇಮಕಥೆ, ಆ್ಯಕ್ಷನ್ ಹೀಗೆ ಎಲ್ಲಾ ಜಾನರ್ನ ಸಿನಿಮಾಗಳನ್ನು ಮಾಡಿದ್ದೇನೆ. ಈ ಜಾನರ್ಗಳನ್ನು ಮಿಶ್ರಣ ಮಾಡಿ ಒಂದು ಸಿನಿಮಾ ಮಾಡಿದರೆ ಹೇಗಿರುತ್ತದೆ ಎನ್ನುವ ಆಲೋಚನೆ ಮೊದಲಿನಿಂದಲೇ ಇತ್ತು. ಈ ರಸಗಳೆಲ್ಲವನ್ನೂ ಸೇರಿಸಿ ಈ ಸಿನಿಮಾ ಮಾಡಿದ್ದೇನೆ’ ಎಂದರು.</p>.<p>‘ಈ ಚಿತ್ರದ ಚಿತ್ರಕಥೆ ರಚಿಸಲು ಸುಮಾರು ಒಂದೂವರೆ ವರ್ಷಕ್ಕೂ ಅಧಿಕ ಸಮಯ ತೆಗೆದುಕೊಂಡೆ. ಇದೊಂದು ಪಕ್ಕಾ ಕಮರ್ಷಿಯಲ್ ಎಂಟರ್ಟೇನ್ಮೆಂಟ್ ಸಿನಿಮಾ. ಕಥೆಯಲ್ಲಿ ಪಯಣವೂ ಇದೆ. ಕೋರ್ಟ್ ರೂಮ್ ಡ್ರಾಮಾ, ಕೌಟುಂಬಿಕ ಹಾಗೂ ಭಾವನಾತ್ಮಕ ಅಂಶಗಳು, ಸ್ನೇಹ ಹೀಗೆ ಹಲವು ಪದರಗಳು ಕಥೆಯೊಳಗಿವೆ’ ಎಂದರು.</p>.<p>‘ಕಥೆಗೆ ಅಗತ್ಯವಿದ್ದ ಕಾರಣ ಶಿವರಾಜ್ಕುಮಾರ್, ಜಯರಾಮ್, ಸಾಯಿಕುಮಾರ್ ಅವರಂಥ ದಿಗ್ಗಜರನ್ನೇ ಹಾಕಿಕೊಂಡಿದ್ದೇನೆ. ಅವರನ್ನು ಜೊತೆಯಾಗಿ ತೆರೆಯ ಮೇಲೆ ನೋಡುವುದೇ ಖುಷಿ. ಪ್ರಸ್ತುತ ಅಗತ್ಯ ಇದೆಯೋ ಇಲ್ಲವೋ ಪ್ರತಿ ಸಿನಿಮಾದಲ್ಲಿ ಸ್ಟಾರ್ಗಳನ್ನು ಕಥೆಗೆ ತುರುಕುವ ಸ್ಥಿತಿ ಇದೆ. ಆದರೆ ನಾವು ಯಾರನ್ನೂ ಒತ್ತಾಯಪೂರ್ವಕವಾಗಿ ಕಥೆಗೆ ಸೇರಿಸಿಲ್ಲ. ಮಲ್ಟಿಸ್ಟಾರರ್ ಸಿನಿಮಾ ಮಾಡಬೇಕು ಎನ್ನುವ ಹಟದಿಂದ ಹೀಗೆ ಮಾಡಿಲ್ಲ. ಎಲ್ಲರೂ ತಮ್ಮ ಪಾತ್ರಗಳನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ. ಫಸ್ಟ್ಲುಕ್ ಅನ್ನು ಜನರು ಯಾವ ರೀತಿ ಸ್ವೀಕರಿಸುತ್ತಾರೆ ಎನ್ನುವ ಕುತೂಹಲವಿದೆ’ ಎನ್ನುತ್ತಾ ಶೂಟಿಂಗ್ ಅನುಭವಗಳತ್ತ ಮಾತು ಹೊರಳಿಸಿದರು ಪವನ್.</p>.<p><strong>‘ಉತ್ತರ ಭಾರತದ ಶೂಟಿಂಗ್ ಅನುಭವ ಚೆನ್ನಾಗಿತ್ತು</strong></p>.<p>‘ಉತ್ತರ ಭಾರತದ ಶೂಟಿಂಗ್ ಅನುಭವ ಚೆನ್ನಾಗಿತ್ತು. ವಾತಾವರಣವೂ ನಮ್ಮ ಶೂಟಿಂಗ್ಗೆ ಸೂಕ್ತವಾಗಿತ್ತು. ಧರ್ಮಶಾಲಾದಲ್ಲಿ ಟಿಬೆಟಿಯನ್ ಧಾರ್ಮಿಕ ನಾಯಕ ದಲೈಲಾಮಾ ಅವರನ್ನು ಭೇಟಿಯಾಗಿದ್ದೆವು. ಸುಮಾರು 80 ದಿನ ಶೂಟಿಂಗ್ ಮಾಡಿದ್ದೇವೆ. ಶಿವರಾಜ್ಕುಮಾರ್ ಅವರ ಜೊತೆ ಕೆಲಸ ಮಾಡುವುದೇ ಖುಷಿ. ಅವರೊಬ್ಬ ನಿರ್ದೇಶಕರ ನಟ. ಅವರು ನಿರ್ಮಾಪಕರ ದೃಷ್ಟಿಯಿಂದ ಆಲೋಚಿಸುವವರು. ಎಲ್ಲಿ ಖರ್ಚು ಉಳಿಸಬಹುದು ಎಂದು ಯೋಚಿಸುವವರು. ನನ್ನ ಈ ಸಿನಿಪಯಣದಲ್ಲಿ ಇಲ್ಲಿಯವರೆಗೆ ಮಾಡಿದ ಸಿನಿಮಾಗಳು ಒಂದು ಅನುಭವವಾದರೆ, ‘ಬೇಲ್’ ಹೊಸ ಅನುಭವ. ಸಿನಿಮಾದ ಸಣ್ಣಪುಟ್ಟ ಕೆಲಸಗಳು ಬಾಕಿ ಇವೆ. ಟೀಸರ್ನಲ್ಲಿ ಬಿಡುಗಡೆ ದಿನಾಂಕದ ಮಾಹಿತಿ ಹಂಚಿಕೊಳ್ಳುತ್ತೇವೆ. ಇದೇ ವರ್ಷದಲ್ಲೇ ಸಿನಿಮಾ ಬಿಡುಗಡೆ ಮಾಡಲಿದ್ದೇವೆ’ ಎನ್ನುತ್ತಾ ಮಾತಿಗೆ ವಿರಾಮವಿತ್ತರು.</p>.<p>ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ನ ವೆಂಕಟ್ ಕೆ.ನಾರಾಯಣ್ ನಿರ್ಮಾಣ ಮಾಡಿದ್ದಾರೆ. ‘ಸಲಗ’, ‘ಎಕ್ಕ’ ಖ್ಯಾತಿಯ ಸಂಜನಾ ಆನಂದ್, ‘ದಿಯಾ’, ‘ದಸರಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿ ಅವರೂ ತಾರಾಬಳಗದಲ್ಲಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260515-51-371210747</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>