ಇದೀಗ ಶಿವರಾಜ್ಕುಮಾರ್ ಅವರು ಚಂದನವನಕ್ಕೆ ಹೆಜ್ಜೆ ಇಡುತ್ತಿರುವ ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಅವರಿಗೂ ಸಿನಿಮಾದಲ್ಲಿ ಮಚ್ಚು ಹಿಡಿದು ಅಭಿನಯಿಸುವ ತರಬೇತಿಯನ್ನು ನೀಡಿದ್ದಾರೆ.‘ಅಧ್ಯಕ್ಷ’, ‘ರನ್ನ’, ‘ಪೊಗರು’ನಂತಹ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ ನಂದ ಕಿಶೋರ್ ಅವರ ನಿರ್ದೇಶನದ ಸಿನಿಮಾ ‘ರಾಣ’ದಲ್ಲಿ ಶ್ರೇಯಸ್ ನಾಯಕ. ಇತ್ತೀಚೆಗೆ ಚಿತ್ರತಂಡವು ಶಿವರಾಜಕುಮಾರ್ ಅವರನ್ನು ಭೇಟಿ ಮಾಡಿದಾಗ ಚಿತ್ರ ತಂಡಕ್ಕೆ ಶುಭಕೋರಿದ ಅವರು, ಶ್ರೇಯಸ್ಗೆ ಲಾಂಗ್ ಹೇಗೆ ಹಿಡಿಯಬೇಕು, ಕ್ಯಾಮೆರಾ ಮುಂದೆ ಲಾಂಗ್ ಹಿಡಿದು ಹೇಗೆ ಅಭಿನಯಿಸಬೇಕು ಎನ್ನುವುದನ್ನು ಹೇಳಿಕೊಟ್ಟಿದ್ದಾರೆ.