ಬೆಂಗಳೂರು:ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಶೋಷಣೆಯ ಆಪಾದನೆ ಹೊರಿಸಿರುವ ಕಾರಣಕ್ಕೆ ಶ್ರುತಿ ಅವರನ್ನು ಬಿ.ಎಸ್. ಲಿಂಗದೇವರು ಅವರ ‘ದಾರಿ ತಪ್ಪಿಸು ದೇವರೇ’ ಚಿತ್ರದಿಂದ ಕೈಬಿಡಲಾಗಿದೆಯೇ? ಹೀಗೊಂದು ಸುದ್ದಿ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಕಳೆದ ಎರಡು ದಿನಗಳಿಂದ ಚರ್ಚಿತವಾಗುತ್ತಿದೆ. ಈ ಕುರಿತಂತೆ ಪ್ರಜಾವಾಣಿ ಜತೆ ಮಾತನಾಡಿರುವ ಲಿಂಗದೇವರು ‘ನನ್ನ ಸಿನಿಮಾದಲ್ಲಿ ಶ್ರುತಿ ನಟಿಸುವುದು ಖಚಿತವಿಲ್ಲ. ಆದರೆ ‘ಮೀ ಟೂ’ ಅಭಿಯಾನಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.