ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ ಆಕೆಯ ತಂದೆ ಮಹಾದೇವ್ ಬಾಪು ರಾಜ್ಗುರು ಅವರಿಗೂ ಇದು ಸಮಾಧಾನ ತಂದಿದೆಯಂತೆ. ‘ಪರೀಕ್ಷೆ ಎಂದರೆ ಆತಂಕ ಇದ್ದೇ ಇರುತ್ತದೆ. ಅಂತಹ ಸಂದರ್ಭದಲ್ಲಿ ಅಭಿಮಾನಿಗಳು ಸೆಲ್ಫಿ, ಆಟೊಗ್ರಾಫ್ ಎಂದು ಮಗಳನ್ನು ಪೀಡಿಸುವುದಕ್ಕಿಂತ ಪೊಲೀಸ್ ಭದ್ರತೆಯಲ್ಲಿ ಬಂದು ಹೋಗುವುದೇ ಸರಿ’ ಎಂದು, ಹೇಳಿದ್ದಾರೆ.