ಚರಣ್ ನೀಡಿರುವ ಈ ಮಾಹಿತಿಯು ಎಸ್ಪಿಬಿ ಅವರ ಅಭಿಮಾನಿಗಳಲ್ಲಿ ಸಂತಸದ ಅಲೆಯನ್ನು ಉಕ್ಕಿಸಿದೆ. ಎಸ್ಬಿಪಿ ಕೋವಿಡ್ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಶೀಘ್ರ ಮನೆಗೆ ಮರಳಲಿ ಎಂದು ‘ಸೂಪರ್ ಸ್ಟಾರ್’ ರಜನಿಕಾಂತ್, ಇಳೆಯರಾಜ ಸೇರಿದಂತೆ ತಮಿಳು ಚಿತ್ರರಂಗದ ಹಲವು ಗಣ್ಯರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದು ಉಂಟು. ಕನ್ನಡ ಚಿತ್ರರಂಗದಿಂದಲೂ ಹಂಸಲೇಖ ಸೇರಿದಂತೆ ಹಲವು ನಟ, ನಟಿಯರು ಎಸ್ಬಿಪಿ ಅವರ ಚೇತರಿಕೆ ಸಂಬಂಧ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದರು.