<p><strong>ಚೆನ್ನೈ</strong>: ತಮಿಳಿನ ‘ಕರುಪ್ಪು’ ಸಿನಿಮಾ ಯಶಸ್ಸಿನ ಬೆನ್ನಲ್ಲೇ ನಟ ಸೂರ್ಯ ಅವರು ತಮ್ಮ ತಂಡದಲ್ಲಿ ಕೆಲಸ ಮಾಡಿದ್ದವರಿಗೆ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.</p><p>ಛಾಯಾಚಿತ್ರಗ್ರಾಹಕ ಜಿ.ಕೆ. ವಿಷ್ಣು, ಸಿನಿಮಾ ಸಂಕಲನಕಾರ ಮತ್ತು ಸಂಗೀತ ನಿರ್ದೇಶಕರಿಗೆ ‘ಮಹೀಂದ್ರಾ ಬಿಇ6 ಬ್ಯಾಟ್ಮಾನ್ ಎಡಿಷನ್’ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. </p><p>ಈ ಕಾರಿನ ಬೆಲೆ ₹28.49 ಲಕ್ಷ ಇದೆ. </p>.<p>ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಜಿ.ಕೆ. ವಿಷ್ಣು ಅವರು ಸೂರ್ಯ ಅವರಿಗೆ ‘ಧನ್ಯವಾದ, ನಿಮ್ಮದು ವಿಶಾಲ ಹೃದಯ’ ಎಂದು ಹೇಳಿದ್ದಾರೆ.</p><p>ಸಂಕಲನಕಾರ ಕಲೈವನನ್ ಆರ್. ಅವರೂ ಐಷಾರಾಮಿ ಕಾರು ಉಡುಗೊರೆ ನೀಡಿದ್ದಕ್ಕೆ ಧನ್ಯವಾದ ಹೇಳಿದ್ದಾರೆ. ಕಾರಿನ ಮುಂದೆ ಕುಟುಂಬದೊಂದಿಗೆ ನಿಂತು ಫೋಟೊ ತೆಗೆಸಿಕೊಂಡು ಹಂಚಿಕೊಂಡಿದ್ದಾರೆ. </p>.<p>ಈ ಬಗ್ಗೆ ಸಿನಿಮಾದ ನಿರ್ದೇಶಕ ಆರ್.ಜೆ.ಬಾಲಾಜಿ ಕೂಡ ಪೋಸ್ಟ್ ಹಂಚಿಕೊಂಡು ‘ಹೀರೋ, ನಿರ್ದೇಶಕನಿಗೆ ಉಡುಗೊರೆ ನೀಡಿರುವುದು ಇದೇ ಮೊದಲು’ ಎಂದು ಬರೆದುಕೊಂಡಿದ್ದಾರೆ.</p><p>ಸಂಗೀತ ಸಂಯೋಜಕ ಸಾಯಿ ಅಭಯಂಕರ್ ಕೂಡ ಸೂರ್ಯ ಅವರಿಗೆ ಧನ್ಯವಾದ ಹೇಳಿದ್ದಾರೆ.</p>.<p>ಮೇ 14 ರಂದು ತೆರೆಕಾಣಬೇಕಿದ್ದ ಸೂರ್ಯ ಹಾಗೂ ತ್ರಿಷಾ ನಟನೆಯ ‘ಕರುಪ್ಪು’ ಚಿತ್ರ ಕೊನೆಕ್ಷಣದಲ್ಲಿ ಮೊದಲ ಪ್ರದರ್ಶನ ಕಂಡಿರಲಿಲ್ಲ. ನಂತರ ಮೇ 15ರಂದು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಹಲವು ಏಳು ಬೀಳುಗಳ ನಡುವೆ ಸಿನಿಮಾ ಯಶಸ್ವಿಯಾಗಿದೆ. </p><p>‘ಕರುಪ್ಪು’ ಜಗತ್ತಿನಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದ್ದು ಈವರೆಗೆ ₹300 ಕೋಟಿ ಗಳಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ</strong>: ತಮಿಳಿನ ‘ಕರುಪ್ಪು’ ಸಿನಿಮಾ ಯಶಸ್ಸಿನ ಬೆನ್ನಲ್ಲೇ ನಟ ಸೂರ್ಯ ಅವರು ತಮ್ಮ ತಂಡದಲ್ಲಿ ಕೆಲಸ ಮಾಡಿದ್ದವರಿಗೆ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.</p><p>ಛಾಯಾಚಿತ್ರಗ್ರಾಹಕ ಜಿ.ಕೆ. ವಿಷ್ಣು, ಸಿನಿಮಾ ಸಂಕಲನಕಾರ ಮತ್ತು ಸಂಗೀತ ನಿರ್ದೇಶಕರಿಗೆ ‘ಮಹೀಂದ್ರಾ ಬಿಇ6 ಬ್ಯಾಟ್ಮಾನ್ ಎಡಿಷನ್’ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. </p><p>ಈ ಕಾರಿನ ಬೆಲೆ ₹28.49 ಲಕ್ಷ ಇದೆ. </p>.<p>ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಜಿ.ಕೆ. ವಿಷ್ಣು ಅವರು ಸೂರ್ಯ ಅವರಿಗೆ ‘ಧನ್ಯವಾದ, ನಿಮ್ಮದು ವಿಶಾಲ ಹೃದಯ’ ಎಂದು ಹೇಳಿದ್ದಾರೆ.</p><p>ಸಂಕಲನಕಾರ ಕಲೈವನನ್ ಆರ್. ಅವರೂ ಐಷಾರಾಮಿ ಕಾರು ಉಡುಗೊರೆ ನೀಡಿದ್ದಕ್ಕೆ ಧನ್ಯವಾದ ಹೇಳಿದ್ದಾರೆ. ಕಾರಿನ ಮುಂದೆ ಕುಟುಂಬದೊಂದಿಗೆ ನಿಂತು ಫೋಟೊ ತೆಗೆಸಿಕೊಂಡು ಹಂಚಿಕೊಂಡಿದ್ದಾರೆ. </p>.<p>ಈ ಬಗ್ಗೆ ಸಿನಿಮಾದ ನಿರ್ದೇಶಕ ಆರ್.ಜೆ.ಬಾಲಾಜಿ ಕೂಡ ಪೋಸ್ಟ್ ಹಂಚಿಕೊಂಡು ‘ಹೀರೋ, ನಿರ್ದೇಶಕನಿಗೆ ಉಡುಗೊರೆ ನೀಡಿರುವುದು ಇದೇ ಮೊದಲು’ ಎಂದು ಬರೆದುಕೊಂಡಿದ್ದಾರೆ.</p><p>ಸಂಗೀತ ಸಂಯೋಜಕ ಸಾಯಿ ಅಭಯಂಕರ್ ಕೂಡ ಸೂರ್ಯ ಅವರಿಗೆ ಧನ್ಯವಾದ ಹೇಳಿದ್ದಾರೆ.</p>.<p>ಮೇ 14 ರಂದು ತೆರೆಕಾಣಬೇಕಿದ್ದ ಸೂರ್ಯ ಹಾಗೂ ತ್ರಿಷಾ ನಟನೆಯ ‘ಕರುಪ್ಪು’ ಚಿತ್ರ ಕೊನೆಕ್ಷಣದಲ್ಲಿ ಮೊದಲ ಪ್ರದರ್ಶನ ಕಂಡಿರಲಿಲ್ಲ. ನಂತರ ಮೇ 15ರಂದು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಹಲವು ಏಳು ಬೀಳುಗಳ ನಡುವೆ ಸಿನಿಮಾ ಯಶಸ್ವಿಯಾಗಿದೆ. </p><p>‘ಕರುಪ್ಪು’ ಜಗತ್ತಿನಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದ್ದು ಈವರೆಗೆ ₹300 ಕೋಟಿ ಗಳಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>