ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಣ್ಣನ ಸಿಟ್ಟು ಮತ್ತು ಅಂತಃಕರಣ

Last Updated 8 ಜನವರಿ 2020, 19:45 IST
ಅಕ್ಷರ ಗಾತ್ರ

ಭಯಂಕರ ಸಿಟ್ಟು ಮತ್ತು ಹಾಸ್ಯಪ್ರವೃತ್ತಿಗೆ ಹೆಸರಾದ ತೆಲುಗು ನಟ ನಂದಮೂರಿ ಬಾಲಕೃಷ್ಣ ಮಾನವೀಯತೆ ಮತ್ತು ಅಂತಃಕರಣದ ಸ್ವಭಾವ ಕೂಡ ಎಲ್ಲರಿಗೂ ತಿಳಿದಿರುವ ವಿಷಯ. ನಟ ಪಿ. ವಿಜಯ್‌ ಕುಮಾರ್‌ ಅವರಕ್ಯಾನ್ಸರ್‌ ಪೀಡಿತ ಪತ್ನಿಗೆ ನೆರವು ನೀಡಿದ್ದಾರೆ. ರಾಮ್‌ ಗೋಪಾಲ್‌ ವರ್ಮಾ ಅವರ ‘ಲಕ್ಷ್ಮಿ ಎನ್‌ಟಿಆರ್‌’ ಚಿತ್ರದಲ್ಲಿ ಪಿ. ವಿಜಯಕುಮಾರ್‌ ಅವರು ಎನ್‌ಟಿಆರ್‌ ಪಾತ್ರದಲ್ಲಿ ಮಿಂಚಿದ್ದರು.

ಪತ್ನಿಗೆ ದುಬಾರಿ ಚಿಕಿತ್ಸೆಯ ವೆಚ್ಚ ಭರಿಸಲು ವಿಜಯ್‌ ಕುಮಾರ್‌ಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಎನ್‌ಟಿಆರ್‌ ಕುಟುಂಬ ನಡೆಸುತ್ತಿರುವ ಬಸವತಾರಕಂ ಟ್ರಸ್ಟ್‌ನ ಕ್ಯಾನ್ಸರ್ ಆಸ್ಪತ್ರೆಗೆ ತಮ್ಮ ಪತ್ನಿಯನ್ನು ಸೇರಿಸಿದ್ದಾರೆ. ಈ ವಿಷಯ ತಿಳಿದ ತಕ್ಷಣನಟ ಬಾಲಕೃಷ್ಣ ಅವರು ಉಚಿತ ಚಿಕಿತ್ಸೆಗೆ ಎಲ್ಲ ಏರ್ಪಾಡು ಮಾಡಿದ್ದಾರೆ. ವಿಜಯ್‌ ಪತ್ನಿ ಆರೈಕೆಗೆ ವಿಶೇಷ ಕಾಳಜಿ ವಹಿಸುವಂತೆ ವೈದ್ಯರಿಗೆ ಸೂಚಿಸಿದ್ದಾರೆ.

ಮೂಳೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅನಂತಪುರ ಜಿಲ್ಲೆಯ ಸ್ವಪ್ನಾ ಎಂಬ ಬಾಲಕಿಗೆ ಬಾಲಕೃಷ್ಣ ನೆರವು ನೀಡಿದ್ದರು. ತಮ್ಮ ಕುಟುಂಬದ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಕೊಡಿಸಿದ್ದರು. ರೂಲರ್‌ ಚಿತ್ರದ ಹೀನಾಯ ಸೋಲಿನಿಂದ ಹೊರಬಂದಿರುವ ಬಾಲಕೃಷ್ಣಸದ್ಯ ಬೋಯಾಪಟಿ ಶ್ರೀನು ನಿರ್ದೇಶನದ ಚಿತ್ರದ ಶೂಟಿಂಗ್‌ಗೆ ಸಜ್ಜಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT