ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವಾರ ತೆರೆಗೆ

Last Updated 20 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಪಾಪ್‍ಕಾರ್ನ್‌ ಮಂಕಿ ಟೈಗರ್

ಸ್ಟುಡಿಯೊ 18 ಲಾಂಛನದಡಿ ಸುಧೀರ್ ಕೆ.ಎಂ. ನಿರ್ಮಿಸಿರುವ ದುನಿಯಾ ಸೂರಿ ನಿರ್ದೇಶನದ ‘ಪಾಪ್‍ಕಾರ್ನ್ ಮಂಕಿ ಟೈಗರ್’ ಚಿತ್ರ ಬಿಡುಗಡೆಯಾಗುತ್ತಿದೆ.

ಚರಣ್‍ರಾಜ್ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ಶೇಖರ್ ಎಸ್. ಅವರ ಛಾಯಾಗ್ರಹಣವಿದೆ. ದೀಪು ಎಸ್. ಕುಮಾರ್ ಅವರ ಸಂಕಲನವಿದೆ. ಜಾಲಿ ಬಾಸ್ಟಿನ್ ಸಾಹಸ ನಿರ್ದೇಶಿಸಿದ್ದಾರೆ. ಮಲ್ಲ ಅವರ ಕಲಾ ನಿರ್ದೇಶನವಿದೆ. ಅಮೃತ್ ಭಾರ್ಗವ್ ಸಹ ನಿರ್ದೇಶನ ಮಾಡಿದ್ದಾರೆ.

‘ಡಾಲಿ’ ಖ್ಯಾತಿಯ ಧನಂಜಯ್ ನಾಯಕರಾಗಿದ್ದಾರೆ. ನಿವೇದಿತಾ, ಸುಧಿ, ನವೀನ್, ಮೋನಿಷಾ ನಾಡ್‍ಗಿರ್, ಸಪ್ತಮಿ ಗೌಡ, ಅಮೃತಾ ಅಯ್ಯಂಗಾರ್, ಪೂರ್ಣಚಂದ್ರ ತಾರಾಗಣದಲ್ಲಿದ್ದಾರೆ.

ಶಿವಾಜಿ ಸುರತ್ಕಲ್

ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಲಾಂಛನದಡಿ ರೇಖಾ ಕೆ.ಎನ್. ಹಾಗೂ ಅನೂಪ್ ಗೌಡ ನಿರ್ಮಿಸಿರುವ ನಟ ರಮೇಶ್ ಅರವಿಂದ್ ನಟನೆಯ 101ನೇ ಚಿತ್ರ ‘ಶಿವಾಜಿ ಸುರತ್ಕಲ್’ ತೆರೆ ಕಾಣುತ್ತಿದೆ.

ಆಕಾಶ್ ಶ್ರೀವತ್ಸ ಇದನ್ನು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ‘ದಿ ಕೇಸ್ ಆಫ್‌ ರಣಗಿರಿ’ ಎಂಬ ಅಡಿಬರಹವಿದೆ. ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಗುರುಪ್ರಸಾದ್ ಅವರ ಛಾಯಾಗ್ರಹಣವಿದೆ. ಶ್ರೀಕಾಂತ್, ಆಕಾಶ್ ಶ್ರೀವತ್ಸ ಅವರ ಸಂಕಲನವಿದೆ. ಅಭಿಜಿತ್ ಹಾಗೂ ಆಕಾಶ್ ಶ್ರೀವತ್ಸ ಚಿತ್ರಕಥೆ ಬರೆದ್ದಾರೆ. ಜಯಂತ ಕಾಯ್ಕಿಣಿ ಸಾಹಿತ್ಯ ರಚಿಸಿದ್ದಾರೆ. ರಾಧಿಕಾ ನಾರಾಯಣ್, ಆರೋಹಿ ನಾರಾಯಣ್‌ ತಾರಾಗಣದಲ್ಲಿದ್ದಾರೆ.

ಆದ್ಯಾ

ಪೀಪಲ್ ಮೀಡಿಯಾ ಫ್ಯಾಕ್ಟರಿ ಹಾಗೂ ಎಸ್.ಟಿ.ಎಂ. ಎಂಟರ್‌ಟೈನ್‌ಮೆಂಟ್ಸ್‌ ಲಾಂಛನದಡಿ ಟಿ.ಜಿ. ವಿಶ್ವಪ್ರಸಾದ್ ಹಾಗೂ ರಘುನಾಥ್ ಎಸ್. ನಿರ್ಮಿಸಿರುವ ‘ಆದ್ಯಾ’ ಸಿನಿಮಾ ಬಿಡುಗಡೆಯಾಗುತ್ತಿದೆ. ವಿವೇಕ್ ಕುಚಿಭೋಟ್ಲ ಇದರ ನಿರ್ಮಾಪಕರಾಗಿದ್ದಾರೆ.

ಚೈತನ್ಯ ಕೆ.ಎಂ. ನಿರ್ದೇಶನದ ಈ ಚಿತ್ರಕ್ಕೆ ಶ್ರೀಧರ್ ವಿ. ಸಂಭ್ರಮ್ ಸಂಗೀತ ನೀಡಿದ್ದಾರೆ. ಮಲ್ಹಾರ ಭಟ್ ಜೋಶಿ ಅವರ ಛಾಯಾಗ್ರಹಣವಿದೆ. ಅಕ್ಷಯ್ ಪಿ. ರಾವ್ ಅವರ ಸಂಕಲನವಿದೆ. ರೋಹಿತ್ ಪದಕಿ ಸಂಭಾಷಣೆ ಬರೆದಿದ್ದಾರೆ. ಚಿರಂಜೀವಿ ಸರ್ಜಾ ನಾಯಕರಾಗಿದ್ದಾರೆ. ಸಂಗೀತಾ ಭಟ್, ಶ್ರುತಿ ಹರಿಹರನ್, ಶಶಾಂಕ್ ಪುರುಷೋತ್ತಮ್, ರವಿಶಂಕರ್ ಗೌಡ, ಪ್ರಮೋದ್ ಶೆಟ್ಟಿ, ಗಿರಿರಾಜ್, ಚೈತ್ರಾ ರಾವ್, ಹರೀಶ್ ಶೇಷಾದ್ರಿ ತಾರಾಗಣದಲ್ಲಿದ್ದಾರೆ.

ಸೀತಮ್ಮ ಬಂದಳು
ಸಿರಿಮಲ್ಲಿಗೆ ತೊಟ್ಟು

ಕವನ ಪಿಕ್ಚರ್ಸ್ ಲಾಂಛನದಡಿ ಬಿ. ಹನುಮಂತರಾಜು ನಿರ್ಮಿಸಿರುವ ‘ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು’ ಸಿನಿಮಾ ತೆರೆ ಕಾಣುತ್ತಿದೆ. ಅಶೋಕ್ ಕಡಬ ನಿರ್ದೇಶನದ ಈ ಚಿತ್ರಕ್ಕೆ ಕಾರ್ತಿಕ್ ವೆಂಕಟೇಶ್ ಸಂಗೀತ ನೀಡಿದ್ದಾರೆ. ಅರುಣ್ ಕುಮಾರ್ ಅವರ ಛಾಯಾಗ್ರಹಣವಿದೆ. ಅರುಣ್ ಅವರ ಸಂಕಲನವಿದೆ. ನಂದೀಶ್ ಕುಮಾರ್, ಸಂಹಿತಾ ವಿನ್ಯಾ, ವಿನ್ನಿ ಫರ್ನಾಂಡಿಸ್ ತಾರಾಗಣದಲ್ಲಿದ್ದಾರೆ.

ಮೌನಂ

ನಿಹಾರಿಕಾ ಮೂವೀಸ್ ಲಾಂಛನದಡಿ ಶ್ರೀಹರಿ ನಿರ್ಮಿಸಿರುವ ‘ಮೌನಂ’ ಚಿತ್ರ ತೆರೆ ಕಾಣುತ್ತಿದೆ. ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ. ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ರಾಜ್ ಪಂಡಿತ್ ಅವರೇ ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಛಾಯಾಗ್ರಹಣ ಶಂಕರ್ ಅವರದು. ಆರವ್ ರಿಶಿಕ್ ಸಂಗೀತ ನೀಡಿದ್ದಾರೆ. ಗುರುಮೂರ್ತಿ ಹೆಗಡೆ ಸಂಕಲನ ನಿರ್ವಹಿಸಿದ್ದಾರೆ. ಕೌರವ ವೆಂಕಟೇಶ್ ಮತ್ತು ಅಲ್ಟಿಮೇಟ್ ಶಿವು ಸಾಹಸ ನಿರ್ದೇಶಿಸಿದ್ದಾರೆ. ಆಕಾಶ್ ಎಸ್. ಸಾಹಿತ್ಯ ರಚಿಸಿದ್ದಾರೆ. ಅವಿನಾಶ್, ಮಯೂರಿ, ಬಾಲಾಜಿ ಶರ್ಮ, ಹನುಮಂತೇಗೌಡ, ರಿತೇಶ್, ಕೆಂಪೇಗೌಡ, ಗುಣವಂತ ಮಂಜು, ನಯನಾ, ಸಿಂಚನಾ, ಮಂಜುಳಾ ರೆಡ್ಡಿ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT