ಹೈದರಾಬಾದ್: ಖಾಸಗಿ ಸುದ್ದಿ ವಾಹಿನಿ ನಿರೂಪಕಿ ಹಾಗೂ ತೆಲುಗಿನ ಯುವ ನಾಯಕ ವಿಶ್ವಕ್ ಸೇನ್ ನಡುವಿನ ಮಾತಿನ ಜಟಾಪಟಿ ವಿಕೋಪಕ್ಕೆ ತಿರುಗಿದ್ದು, ವಿಶ್ವಕ್ ಸೇನ್ ಅವರನ್ನು ‘ಗೆಟ್ ಔಟ್ ಆಫ್ ಮೈ ಸ್ಟುಡಿಯೊ‘ ಎಂದು ನಿರೂಪಕಿ ಹೇಳಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ವಿಶ್ವಕ್ ಸೇನ್ ಅವರು 'ಅಶೋಕ ವನಂಲೋ ಅರ್ಜುನ ಕಲ್ಯಾಣಂ' ಎಂಬ ಹೊಸ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಪ್ರಚಾರದ ಭಾಗವಾಗಿ ಅವರು ಹೈದರಾಬಾದಿನ ರಸ್ತೆಯೊಂದರಲ್ಲಿ ಪ್ರಾಂಕ್ ವಿಡಿಯೊ ಮಾಡಿದ್ದರು. ಅದರಲ್ಲಿ ಅವರು ಮದುವೆಯಾಗಿಲ್ಲ ಎಂದು ಆತ್ಮಹತ್ಯೆಗೆ ಯತ್ನಿಸುತ್ತಾರೆ.
ಈ ವಿಡಿಯೊ ಮಾಡಿರುವುದನ್ನು ಖಂಡಿಸಿ ಮಾನವ ಹಕ್ಕುಗಳ ಹೋರಾಟಗಾರರೊಬ್ಬರು ದೂರು ದಾಖಲಿಸುತ್ತಾರೆ. ಈ ಘಟನೆ ಬಗ್ಗೆ ಖಾಸಗಿ ಸುದ್ದಿ ವಾಹಿನಿಯಲ್ಲಿ ಚರ್ಚೆ ನಡೆಸಲಾಗುತ್ತದೆ. ಈ ಚರ್ಚೆಯಲ್ಲಿ ವಿಶ್ವಕ್ ಸೇನ್ ಕೂಡ ಭಾಗವಹಿಸಿರುತ್ತಾರೆ. ಈ ಸಂದರ್ಭದಲ್ಲಿ ನಿರೂಪಕಿ ಮತ್ತು ವಿಶ್ವಕ್ ನಡುವೆ ವಾಗ್ವಾದ ನಡೆದಿದೆ.
ಪಾಗಲ್ ಸೇನ್ ಹಾಗೂ ಖಿನ್ನತೆಗೆ ಒಳಾಗದವನೆಂದು ಕರೆಯಬೇಡಿ ಎಂದುವಿಶ್ವಕ್ ಏರು ಧ್ವನಿಯಲ್ಲಿ ಹೇಳುತ್ತಾರೆ. ಈ ವೇಳೆ ನಿರೂಪಕಿ ‘ಗೆಟ್ ಔಟ್ ಆಫ್ ಮೈ ಸ್ಟುಡಿಯೊ‘ ಎಂದು ಜೋರಾಗಿ ಕಿರುಚುತ್ತಾರೆ. ನಂತರ ವಿಶ್ವಕ್ ಸ್ಟುಡಿಯೊದಿಂದ ತೆರಳುತ್ತಾರೆ.
ವಿಶ್ವಕ್ ಸೇನ್, ಸ್ಟುಡಿಯೊದಲ್ಲಿ ಮಾತಿನ ನಡುವೆ ಕೆಟ್ಟ ಪದ ಬಳಕೆ ಮಾಡಿರುತ್ತಾರೆ. ಇದಕ್ಕಾಗಿ ಅವರು ಕ್ಷಮೆ ಕೇಳಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರು ನಿರೂಪಕಿಯ ನಡೆಯನ್ನು ಟೀಕಿಸಿದ್ದಾರೆ. ಅವರು ಸಂಯಮದಿಂದ ವರ್ತಿಸಬೇಕಾಗಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಶ್ವಕ್ ಸೇನ್ ಅವರ'ಅಶೋಕ ವನಂಲೋ ಅರ್ಜುನ ಕಲ್ಯಾಣಂ' ಚಿತ್ರ ಮೇ 6ರಂದು ಬಿಡುಗಡೆಯಾಗಲಿದೆ.
All that the guy was asking for is - no one has the right to call him depressed and mad.
— Deepika Narayan Bhardwaj (@DeepikaBhardwaj) May 2, 2022
The anchor then asks him to get out of her studio. Her studio? Do you support this @TV9Telugu ? Would like to hear ur views.
The man was standing up for his own dignity. She has no right to call him depressed. And when she could not accept her mistake, she asks him to get out. Such an inflated and fragile ego she has.
— Nambi VP (@VpNambi) May 2, 2022
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.