ಬದಲಾದ ಸಿನಿಮಾ ಮಾರುಕಟ್ಟೆಯ ಅರ್ಥವ್ಯವಸ್ಥೆಯನ್ನರಿತು ತಮ್ಮ ‘ಸಿನಿಮಾ ಕೆಫೆ’ ಮೂಲಕ ಹೊಸ ಯೋಜನೆಯೊಂದನ್ನು ಶಂಕರ್ ಅವರು ಕೈಗೆತ್ತಿಕೊಂಡಿದ್ದಾರೆ. ಜನರೇ ಬಂಡವಾಳ ಹೂಡಿ ‘ಈಗ’ ಸಿನಿಮಾ ನಿರ್ಮಾಣ ಮಾಡುತ್ತಿರುವುದು ವಿಶೇಷ. ಕನಿಷ್ಠ ₹1 ಲಕ್ಷದಿಂದ ಗರಿಷ್ಠ ₹5 ಲಕ್ಷದವರೆಗೆ ಹೂಡಿಕೆ ಮಾಡಿ ಜನರೇ ಈ ಸಿನಿಮಾ ನಿರ್ಮಾಪಕರಾಗುತ್ತಿದ್ದಾರೆ. ಈ ಹಿಂದೆ ಚಂದನವನದಲ್ಲಿ ಮೂಡಿಬಂದಿದ್ದ ‘ಕಥಾಸಂಗಮ’ದಂತೆಯೇ ‘ಈಗ’ ಕೂಡಾ ಮೂರು ಕಥೆಗಳ ಗುಚ್ಛ. ಈ ಸಿನಿಮಾ, ಪಿ.ಲಂಕೇಶ್ ಅವರ ‘ಮುಟ್ಟಿಸಿಕೊಂಡವನು’, ಪ್ರತಿಭಾ ನಂದಕುಮಾರ್ ಅವರ ‘ಅರುಂಧತಿ’ ಹಾಗೂ ಪಿ.ಮಹಮ್ಮದ್ ಅವರ ‘ಡಿಸೆಂಬರ್ 6’ ಕಥೆಗಳ ಸಂಗಮ.