ಹೈದರಾಬಾದ್: ಟಾಲಿವುಡ್ ನಟವಿಜಯ್ ದೇವರಕೊಂಡ ಕ್ರಿಸ್ಮಸ್ ಹಬ್ಬದ ಅಂಗವಾಗಿ 100 ಜನರಿಗೆ ತಲಾ ₹ 10 ಸಾವಿರ ಮೌಲ್ಯದ ಉಡುಗೊರೆ (ಅಥವಾ ಹಣ)ನೀಡುವುದಾಗಿ ಘೋಷಣೆ ಮಾಡಿದ್ದಾರೆ.
’ದೇವರು ಸಂತಾ’ ಹೆಸರಿನಲ್ಲಿ ₹ 10 ಲಕ್ಷ ಮೌಲ್ಯದ ಉಡುಗೊರೆ ನೀಡುತ್ತಿದ್ದಾರೆ. ಈ ಬಗ್ಗೆ ಟ್ವಿಟರ್ ಖಾತೆಯಲ್ಲಿ ವಿಡಿಯೊ ಪೋಸ್ಟ್ ಮಾಡಿರುವ ಅವರು, ಯಾರು? ಹೇಗೆ? ಉಡುಗೊರೆಪಡೆಯಬಹುದು ಎಂಬಮಾಹಿತಿ ನೀಡಿದ್ದಾರೆ.
ವಿಜಯ್ ದೇವರಕೊಂಡ ನಡೆಸುತ್ತಿರುವ ಬಟ್ಟೆ ಕಂಪೆನಿಯರೌಡಿ ಸಂಘದ 50 ಜನರಿಗೆ ಹಾಗೂ ಇತರೆ 50 (ಯಾರೂ ಬೇಕಾದರೂ) ಜನರಿಗೆ ಉಡುಗೊರೆ ನೀಡುವುದಾಗಿತಿಳಿಸಿದ್ದಾರೆ.
ಈ ಉಡುಗೊರೆ ಪಡೆಯಲು ಜನರು ತಮಗೆ ಹಣ ಯಾಕೆ ಬೇಕು? ಅದರ ಅವಶ್ಯಕತೆ ಏನು? ಎಂಬುದನ್ನು ಬರೆದು ತಿಳಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿರುವ ಅವರ ಖಾತೆಯ ಮೂಲಕವಾದರೂ ಬರೆದು ತಿಳಿಸಬಹುದಾಗಿದೆ. ಆಯ್ದ ನೂರು ಜನರಿಗೆ ಗಿಫ್ಟ್ನೀಡಲಾಗುವುದು(ಇವರಲ್ಲಿ 50 ಜನರೌಡಿ ಸಂಘದವರು) ಎಂದು ಅವರು ಹೇಳಿದ್ದಾರೆ.
ಜನವರಿ 1ರಂದು ಗಿಫ್ಟ್ ಅನ್ನುವಿಜಯ್ ದೇವರಕೊಂಡ ಅವರೇ ನೀಡಲಿದ್ದಾರೆ ಎಂದು ಅವರ ಮ್ಯಾನೇಜರ್ ತಿಳಿಸಿದ್ದಾರೆ. ವಿಜಯ್ ಅವರು ಉಡುಗೊರೆಯನ್ನು ವಸ್ತು ಅಥವಾ ಹಣದ ರೂಪದಲ್ಲಿ ನೀಡಲಿದ್ದಾರೆ ಎನ್ನಲಾಗಿದೆ.