ಕೃಷ್ಣಗಿರಿ– ಹೊಸೂರು ಹೆದ್ದಾರಿ ಮೂಲಕ ಕಾರಿನಲ್ಲಿ ದಂಪತಿಯು ನಗರಕ್ಕೆ ಬರುತ್ತಿದ್ದರು. ಫೈಸನ್ ಕಾರು ಚಲಾಯಿಸುತ್ತಿದ್ದರೆ, ಹಿಂಬದಿ ಸೀಟಿನಲ್ಲಿ ದಂಪತಿ ಕುಳಿತುಕೊಂಡಿದ್ದರು. ಕರ್ನಾಟಕದಿಂದ ತಮಿಳುನಾಡಿನ ನಮಕ್ಕಲ್ಗೆ ಹೊರಟಿದ್ದ ಲಾರಿಯು ಕಾರಿಗೆ ಡಿಕ್ಕಿ ಹೊಡೆದಿತ್ತು. 100 ಮೀಟರ್ನಷ್ಟು ಕಾರನ್ನು ಉಜ್ಜಿಕೊಂಡು ಹೋಗಿತ್ತು. ಅದರಿಂದ ಕಾರು ಸಂಪೂರ್ಣ ಜಖಂಗೊಂಡು ಮೂವರೂ ಸ್ಥಳದಲ್ಲೇ ಅಸುನೀಗಿದರು.