ತುಮಕೂರು: ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರಿಗೆ ಸ್ವಗ್ರಾಮ ಶಿರಾ ತಾಲ್ಲೂಕಿನ ಬರಗೂರಿನ ಮೇಲೆ ಪ್ರೀತಿ ಹೆಚ್ಚು. ಹುಟ್ಟಿದೂರಿನ ಮೇಲಿನ ಅಭಿಮಾನದ ಕಾರಣಕ್ಕೆ ಗ್ರಾಮಕ್ಕೆ ಹಾಸ್ಟೆಲ್, ಆಸ್ಪತ್ರೆ ಕಟ್ಟಡ, ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಸಾಂಸ್ಕೃತಿಕ ಭವನ ನಿರ್ಮಾಣದಂತಹ ಪ್ರಮುಖ ಕೆಲಸಗಳನ್ನು ಮಾಡಿದ್ದಾರೆ.