ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ನಿಂದ ಚಿತ್ರೀಕರಣ ಸ್ಥಗಿತ | ಧಾರಾವಾಹಿಗಳ ಮರುಪ್ರಸಾರ

Last Updated 9 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಕೊರೊನಾ ಸೋಂಕಿನ ಭೀತಿಯಿಂದಾಗಿ ಧಾರಾವಾಹಿಗಳ ಚಿತ್ರೀಕರಣವೂ ಸ್ಥಗಿತಗೊಂಡಿದೆ. ಹಾಗಾಗಿ, ಎಲ್ಲಾ ವಾಹಿನಿಗಳಲ್ಲಿ ಹಳೆಯ ಸಂಚಿಕೆಗಳೇ ಮರುಪ್ರಸಾರವಾಗುತ್ತಿವೆ. ಈಗ ಜೀಕನ್ನಡ ವಾಹಿನಿಯಲ್ಲೂ ಧಾರಾವಾಹಿ ಸೇರಿದಂತೆ ಹಲವು ಕಾರ್ಯಕ್ರಮಗಳು ಮರುಪ್ರಸಾರವಾಗುತ್ತಿವೆ.

ಸರ್ಕಾರ ಜನರಿಗೆ ಮನೆಯಲ್ಲಿಯೇ ಇರಬೇಕು ಎಂದು ಸೂಚಿಸಿದೆ. ಆದರೆ, ಅಗತ್ಯವಸ್ತುಗಳ ಖರೀದಿಗೆ ಹೊರಗೆ ಬರಲೇಬೇಕು. ಅನಿವಾರ್ಯವಾಗಿ ಹೊರ ಬರುವಾಗ ಜನರು ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂಬುದು ಜೀ ಕನ್ನಡ ವಾಹಿನಿಯ ಮನವಿ.

ಮನೆಯಲ್ಲಿಯೇ ಕುಳಿತರೆ ಮನಸ್ಸಿಗೆ ಬೇಸರವಾಗುತ್ತದೆ. ಹಾಗಾಗಿ, ವಾಹಿನಿಯಲ್ಲಿ ಮತ್ತೆ ಧಾರಾವಾಹಿಗಳು, ಶೋಗಳ ಮರುಪ್ರಸಾರವಾಗುತ್ತಿದೆ. ಅವುಗಳನ್ನು ನೋಡಿ ಆನಂದಿಸಿ ಎಂದು ಕೋರಿದೆ.

ವೀಕ್ಷಕರಿಗಾಗಿ ಬೆಸ್ಟ್‌ ಆಫ್ದಿಬೆಸ್ಟ್‌ ಶೋಗಳ ಪ್ರಸಾರಕ್ಕೆ ವಾಹಿನಿಯು ಯೋಜನೆ ರೂಪಿಸಿದೆ. ಜನರ ಅಚ್ಚುಮೆಚ್ಚಿನ ಧಾರಾವಾಹಿಗಳಾದ ‘ಜೊತೆ ಜೊತೆಯಲಿ’, ‘ಗಟ್ಟಿಮೇಳ’, ‘ಕಮಲಿ’, ‘ನಾಗಿಣಿ 2’, ‘ಪಾರು’ ಮರುಪ್ರಸಾರವಾಗಲಿವೆ. ‘ಮಹರ್ಷಿ ವಾಣಿ‌’, ಟಾಪ್‌ ರಿಯಾಲಿಟಿ ಶೋಗಳಾದ ‘ಸರಿಗಮಪ ಸೀಸನ್‌ 15 ಮತ್ತು17, ‘ಡಾನ್ಸ್‌ ಕರ್ನಾಟಕಡಾನ್ಸ್’, ‘ಕಾಮಿಡಿಕಿಲಾಡಿಗಳು 3’, ‘ಡ್ರಾಮಾ ಜೂನಿಯರ್ಸ್’, ‘ಚೋಟಾಚಾಂಪಿಯನ್’, ‘ವೀಕೆಂಡ್ವಿತ್ರಮೇಶ್’ ಶೋಗಳನ್ನು ಮತ್ತೆ ನೋಡಲು ಅವಕಾಶ ಕಲ್ಪಿಸಿದೆ.

ಅಲ್ಲದೇ, ‘ಹೆಮ್ಮೆಯಕನ್ನಡಿಗ2020’, ‘ಪೈಲ್ವಾನ್ಆಡಿಯೊ ಲಾಂಚ್’, ‘ಕಮಲಿ-ಪಾರುಜಾತ್ರೆ’ ಕೂಡ ಮರುಪ್ರಸಾರವಾಗಲಿದೆ. ಸೂಪರ್‌ ಹಿಟ್‌ ಸಿನಿಮಾಗಳೂ ಪ್ರಸಾರವಾಗಲಿವೆ.

ಇದೇ ಶನಿವಾರ ಮಧ್ಯಾಹ್ನ 1ಕ್ಕೆ ‘ವೀಕೆಂಡ್‌ ವಿತ್‌ ರಮೇಶ್‌’ ಕಾರ್ಯಕ್ರಮದಲ್ಲಿ ನಟ ದರ್ಶನ್‌ ಅವರೊಂದಿಗಿನ ಮಾತುಕತೆ ಮರುಪ್ರಸಾರವಾಗಲಿದೆ. ಭಾನುವಾರ ಮಧ್ಯಾಹ್ನ 1ಗಂಟೆಗೆ ನಟ ಜಗ್ಗೇಶ್‌ ಜೊತೆಗಿನ ಮಾತುಕತೆ ಮರುಪ್ರಸಾರವಾಗಲಿದೆ ಎಂದು ಜೀ ಕನ್ನಡ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT