ಜೀವನದಲ್ಲಿ ನೆಮ್ಮದಿ ಹುಡುಕಿ ಗೋವಾ ಟ್ರಿಪ್ ಹೊರಡುವ ನಾಲ್ವರು ಗೆಳೆಯರು ಅಲ್ಲಿ ಅನುಭವಿಸುವುದು ಏನನ್ನು ಎಂಬುದು ಇದರ ಕಥೆ. ಇದನ್ನು ರಾಜ್ ಗೋಪಿ ನಿರ್ದೇಶಿಸಿದ್ದಾರೆ. ವಿನು ಮನಸು ಸಂಗೀತ, ರಾಜ ಶಿವಶಂಕರ್ ಛಾಯಾಗ್ರಹಣ ಚಿತ್ರಕ್ಕಿದೆ. ಲಕ್ಷ್ಮಣ್, ಶಿವಶಂಕರ್, ಅಶ್ವಿನ್ ಹಾಸನ್, ರಾಘವೇಂದ್ರ ನಾಯಕ್, ಸುಧೀರ್ ಮೈಸೂರು, ರಾಘವೇಂದ್ರ ಬೂದನೂರು, ನಾಗರಾಜ ರಾವ್, ಸುಜಾತಾ, ಭಾಸ್ಕರ್ ಕೆ.ಆರ್., ರಘು ಕುಮಾರ್, ಚೇತನ್ ಮುಂತಾದವರ ತಾರಾಬಳಗ ಚಿತ್ರದಲ್ಲಿದೆ.