ನವದೆಹಲಿ: ಕವಾಯತು ಮಾಡುವಾಗ ಪ್ರಧಾನಿಗೆ ಅಗೌರವ ತೋರಿದ್ದಾರೆ ಎಂಬ ಕಾರಣಕ್ಕೆ ಯೋಧರೊಬ್ಬರಿಗೆ ಒಂದು ವಾರದ ವೇತನ ಕಡಿತಗೊಳಿಸಿದ್ದ ಆದೇಶವನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಬುಧವಾರ ಹಿಂಪಡೆದಿದೆ.
ಈ ಆದೇಶ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಸಮಾಧಾನ ವ್ಯಕ್ತಪಡಿಸಿ, ಕೂಡಲೇ ಆದೇಶ ಹಿಂಪಡೆಯುವಂತೆ ಸೂಚಿಸಿದ್ದರು ಎಂದು ಅರೆ ಸೇನಾಪಡೆಯ ವಕ್ತಾರ ತಿಳಿಸಿದ್ದಾರೆ.
ಫೆಬ್ರುವರಿ 21ರಂದು ಕವಾಯತು ನಡೆಯುತ್ತಿದ್ದ ವೇಳೆ, ಯೋಧ ಸಂಜೀವ್ ಕುಮಾರ್ ‘ಮೋದಿ ಕಾರ್ಯಕ್ರಮ’ ಎಂಬ ಪದ ಬಳಸಿದ್ದರು. ಇದನ್ನು ತಪ್ಪು ಎಂದು ಪರಿಗಣಿಸಿ ಒಂದು ವಾರದ ವೇತನ ಕಡಿತಗೊಳಿಸಿ ಆದೇಶ ಹೊರಡಿಸಲಾಗಿತ್ತು.