<p>ಕಳ್ಳರನ್ನು ಹಿಡಿಯುವ ಪೊಲಿಸರೇ ಕಳ್ಳರಾದರೆ, ಇಡೀ ಇಲಾಖೆಯೇ ಭ್ರಷ್ಟವಾದರೆ ಆಗಬಹುದಾದ ಅನಾಹುತಗಳ ಕುರಿತಾದ ಕಥೆಯನ್ನು ಹೊಂದಿರುವ ಚಿತ್ರ ‘ಶೇಷ 2016’. ಮಲಯಾಳದಲ್ಲಿ ಪೊಲೀಸ್ ಠಾಣೆಯನ್ನೇ ಕಥಾನಾಯಕನನ್ನಾಗಿಟ್ಟುಕೊಂಡು ಸಿನಿಮಾಗಳು ಬಂದಿವೆ. ಆದರೆ ಕನ್ನಡದ ಮಟ್ಟಿಗೆ ಅಪರೂಪದ ಯತ್ನ. ಕರ್ನಾಟಕ ಮತ್ತು ಕೇರಳ ಗಡಿಯಂಚಿನ ಕಾಲ್ಪನಿಕ ಊರು ಪುಷ್ಪಗಿರಿಯಿಂದ ಕಥೆ ಶುರುವಾಗುತ್ತದೆ. ಶೀರ್ಷಿಕೆ ಗೀತೆ ಮತ್ತು ಅದರ ದೃಶ್ಯಗಳಿಂದಲೇ ಇದು ಮಲಯಾಳ ಸ್ವಾದದ ಕನ್ನಡ ಸಿನಿಮಾ ಎಂಬುದು ಮನದಟ್ಟಾಗಿಬಿಡುತ್ತದೆ. ಇಡೀ ಕಾಡನ್ನು ಕಟ್ಟಿಕೊಡುವ, ಅಲ್ಲಿನ ರಸ್ತೆಗಳನ್ನು ತೋರಿಸುವ ಪ್ರಾರಂಭಿಕ ದೃಶ್ಯವೇ ಗಮನ ಸೆಳೆಯುತ್ತದೆ. ಈ ಚಿತ್ರದ ಶೀರ್ಷಿಕೆ ಗೀತೆ ‘ಗರುಡ ಗಮನ’ ಚಿತ್ರದ ‘ಡೀಮೊನ್’ ಗೀತೆಯನ್ನು ನೆನಪಿಸಿದರೂ, ನಡೆಯುವ ಸನ್ನಿವೇಶಗಳಿಗೆ ಆಪ್ತವಾಗಿದೆ. </p>.<p>ಪ್ರಾರಂಭದಲ್ಲಿ ಬರುವ ದೃಶ್ಯಗಳು ಇದು ಮಲಯಾಳದ ‘ಅಂಗಮಾಲಿ ಡೈರೀಸ್’ ರೀತಿಯ ಚಿತ್ರವಿರಬಹುದಾ ಎಂಬ ಅನುಮಾನ ಹುಟ್ಟುಹಾಕುತ್ತದೆ. ಮುಂದೆ ನಡೆಯುವ ಕಥೆಯ ಕೆಲ ತುಣುಕುಗಳನ್ನು ಮೊದಲೇ ತೋರಿಸಿ, ಗೊಂದಲ ಮೂಡಿಸಿ, ಕುತೂಹಲ ಹುಟ್ಟಿಸುವ ಯತ್ನವನ್ನು ನಿರ್ದೇಶಕರು ಪ್ರಾರಂಭದಲ್ಲಿಯೇ ಮಾಡಿದ್ದಾರೆ. ಹೀಗಾಗಿ ಮುಖ್ಯ ಕಥೆ ತೆರೆದುಕೊಳ್ಳಲು ತುಸು ಸಮಯ ಹಿಡಿಯುತ್ತದೆ.</p>.<p>ಇದು ಪುಷ್ಪಗಿರಿ ಪೊಲೀಸ್ ಠಾಣೆಗೆ ಸಂಬಂಧಿತ ಕಥೆ ಎಂಬುದು ಗೊತ್ತಾದ ಬಳಿಕ ಕಥೆ ವೇಗ ಹೆಚ್ಚುತ್ತದೆ. ಇಡೀ ಕಥೆ ಒಂದೇ ರಾತ್ರಿಯಲ್ಲಿ ನಡೆಯುತ್ತದೆ. ಈ ಕಥೆಯ ಜತೆಗೆ ಪೊಲೀಸ್ ಠಾಣೆಯ ಹಿನ್ನೆಲೆ, ಅಲ್ಲಿನ ಅಧಿಕಾರಿ ವರ್ಗದ ಭ್ರಷ್ಟತನವನ್ನು ಪರಿಚಯಿಸುತ್ತ ಹೋದ ರೀತಿ ಚೆನ್ನಾಗಿದೆ. ಠಾಣೆಯ ಒಂದಿಬ್ಬರು ಕಾನ್ಸ್ಟೇಬಲ್ಗಳನ್ನು ಹೊರತುಪಡಿಸಿ ಮಿಕ್ಕೆಲ್ಲರೂ ಭ್ರಷ್ಟರು. ಯಾವ್ಯಾವುದೋ ಪ್ರಕರಣಕ್ಕೆ ನಿರಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸುವ ಈ ಠಾಣೆಗೆ ಮೈತುಂಬ ವಿರೋಧಿಗಳು. ಇಂಥ ಹೊತ್ತಿನಲ್ಲೊಬ್ಬ ಈ ಠಾಣೆಗೆ ಸವಾಲಾಗುತ್ತಾನೆ. ಆ ಸವಾಲು ಏನು?, ಆತ ಯಾರು?, ಅದರಿಂದ ಏನೆಲ್ಲ ಆಗುತ್ತದೆ ಎಂಬುದೇ ಚಿತ್ರಕಥೆ.</p>.<p>ಚಿತ್ರದ ಮೊದಲಾರ್ಧ ಮುಗಿದಿದ್ದೇ ಗೊತ್ತಾಗುವುದಿಲ್ಲ ಎನ್ನುವಷ್ಟು ಸೊಗಸಾಗಿದೆ. ಕಥೆ ಹಾಗೂ ದೃಶ್ಯಗಳನ್ನು ಕಟ್ಟಿಕೊಟ್ಟ ರೀತಿ ಅಲ್ಲಲ್ಲಿ ಮಲಯಾಳದ ‘ನಾಯಟ್ಟು’ ಸಿನಿಮಾವನ್ನು ನೆನಪಿಸುತ್ತದೆ. ಆದಾಗ್ಯೂ ಆ ಕಥೆಗೂ ಇದಕ್ಕೂ ನೇರ ಸಂಬಂಧವಿಲ್ಲ. ಚಿತ್ರ ಕನ್ನಡ ಹಾಗೂ ಮಲಯಾಳದಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಂಡಿರುವುದರಿಂದ ಸಾಕಷ್ಟು ಕಡೆ ಕನ್ನಡದ ಜತೆಗೆ ಮಲಯಾಳ ಬೋರ್ಡ್ಗಳು ಕಾಣಿಸುತ್ತವೆ. ಗಟ್ಟಿಯಾದ ಕಥೆಗೊಂದು ಅಚ್ಚರಿಯ ಕ್ಲೈಮ್ಯಾಕ್ಸ್ ನೀಡುವಲ್ಲಿ ನಿರ್ದೇಶಕರು ಎಡವಿದ್ದಾರೆ. ಜತೆಗೆ ದ್ವಿತೀಯಾರ್ಧವನ್ನು ಇನ್ನಷ್ಟು ಯೋಚಿಸಿ ಬರೆಯುವ, ಮರ್ಡರ್ ಮಿಸ್ಟ್ರಿಗೆ ಬೇಕಾದ ಕೊಂಡಿಗಳನ್ನು ಬೆಸೆದು ಕುತೂಹಲ ಉಳಿಸಿಕೊಳ್ಳುವ ಅವಕಾಶ ನಿರ್ದೇಶಕರಿಗಿತ್ತು. ಇಷ್ಟಾಗಿಯೂ ನಿರ್ದೇಶಕ ಪ್ರದೀಪ್ ಅರಸೀಕೆರೆ ಅವರ ಮೊದಲ ಸಿನಿಮಾವಿದು ಎಂದು ಎಲ್ಲಿಯೂ ಅನ್ನಿಸುವುದಿಲ್ಲ. </p>.<p>ಇನ್ಸ್ಪೆಕ್ಟರ್ ಆಗಿ ಜಾನ್ ಕೈಪಲ್ಲಿ ಪಾತ್ರಕ್ಕೆ ಸೂಕ್ತ ಎನ್ನಿಸುತ್ತಾರೆ. ಆದರೆ ಅವರ ಕನ್ನಡ ಡಬ್ಬಿಂಗ್ನಲ್ಲಿ ಇನ್ನಷ್ಟು ಗಮನಹರಿಸುವ ಅವಶ್ಯಕತೆಯಿತ್ತು. ಎಎಸ್ಪಿಯಾಗಿ ಪ್ರಮೋದ್ ಶೆಟ್ಟಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ದೇವರಾಜ್ ಪಾತ್ರ ಅತಿಥಿ ಪಾತ್ರದಂತಿದೆ. ಕಾನ್ಸ್ಟೇಬಲ್ ಶ್ರೀಜಿತ್ ರವಿ, ಕೆ.ಎಸ್.ಶ್ರೀಧರ್ ಸೇರಿದಂತೆ ಎಲ್ಲ ಕಲಾವಿದರು ಇವರೇ ಇದಕ್ಕೆ ಸೂಕ್ತ ಎನ್ನುವಂತೆ ನಟಿಸಿದ್ದಾರೆ. ಆನಂದ್ ಕುಮಾರ್ ಛಾಯಾಚಿತ್ರಗ್ರಹಣ ಸೊಗಸಾಗಿದೆ. ಪೂರ್ಣಚಂದ್ರ ತೇಜಸ್ವಿ ಅವರ ಹಿನ್ನೆಲೆ ಸಂಗೀತ ಬಹುತೇಕ ದೃಶ್ಯಗಳಿಗೆ ಶಕ್ತಿ ತುಂಬುತ್ತದೆ. ಚಿತ್ರವನ್ನು ಅಚ್ಚುಕಟ್ಟಾಗಿಸುವಲ್ಲಿ ಆಯೂಬ್ ಖಾನ್ ಅವರ ಸಂಕಲನ ಮುಖ್ಯಪಾತ್ರ ವಹಿಸಿದೆ.</p>.<p><strong>ನೋಡಬಹುದಾದ ಚಿತ್ರ</strong></p>.ಕಾಡುವ ‘ಸ್ತ್ರೀ’ ಚಿತ್ರಗಳೂ, ವಿಷಾದದ ಭಾವವೂ...ಸಂದರ್ಶನ | ಒಳ್ಳೆಯ ಪ್ರಯತ್ನ ಸೋತಾಗ ಭಯವಾಗುತ್ತದೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಳ್ಳರನ್ನು ಹಿಡಿಯುವ ಪೊಲಿಸರೇ ಕಳ್ಳರಾದರೆ, ಇಡೀ ಇಲಾಖೆಯೇ ಭ್ರಷ್ಟವಾದರೆ ಆಗಬಹುದಾದ ಅನಾಹುತಗಳ ಕುರಿತಾದ ಕಥೆಯನ್ನು ಹೊಂದಿರುವ ಚಿತ್ರ ‘ಶೇಷ 2016’. ಮಲಯಾಳದಲ್ಲಿ ಪೊಲೀಸ್ ಠಾಣೆಯನ್ನೇ ಕಥಾನಾಯಕನನ್ನಾಗಿಟ್ಟುಕೊಂಡು ಸಿನಿಮಾಗಳು ಬಂದಿವೆ. ಆದರೆ ಕನ್ನಡದ ಮಟ್ಟಿಗೆ ಅಪರೂಪದ ಯತ್ನ. ಕರ್ನಾಟಕ ಮತ್ತು ಕೇರಳ ಗಡಿಯಂಚಿನ ಕಾಲ್ಪನಿಕ ಊರು ಪುಷ್ಪಗಿರಿಯಿಂದ ಕಥೆ ಶುರುವಾಗುತ್ತದೆ. ಶೀರ್ಷಿಕೆ ಗೀತೆ ಮತ್ತು ಅದರ ದೃಶ್ಯಗಳಿಂದಲೇ ಇದು ಮಲಯಾಳ ಸ್ವಾದದ ಕನ್ನಡ ಸಿನಿಮಾ ಎಂಬುದು ಮನದಟ್ಟಾಗಿಬಿಡುತ್ತದೆ. ಇಡೀ ಕಾಡನ್ನು ಕಟ್ಟಿಕೊಡುವ, ಅಲ್ಲಿನ ರಸ್ತೆಗಳನ್ನು ತೋರಿಸುವ ಪ್ರಾರಂಭಿಕ ದೃಶ್ಯವೇ ಗಮನ ಸೆಳೆಯುತ್ತದೆ. ಈ ಚಿತ್ರದ ಶೀರ್ಷಿಕೆ ಗೀತೆ ‘ಗರುಡ ಗಮನ’ ಚಿತ್ರದ ‘ಡೀಮೊನ್’ ಗೀತೆಯನ್ನು ನೆನಪಿಸಿದರೂ, ನಡೆಯುವ ಸನ್ನಿವೇಶಗಳಿಗೆ ಆಪ್ತವಾಗಿದೆ. </p>.<p>ಪ್ರಾರಂಭದಲ್ಲಿ ಬರುವ ದೃಶ್ಯಗಳು ಇದು ಮಲಯಾಳದ ‘ಅಂಗಮಾಲಿ ಡೈರೀಸ್’ ರೀತಿಯ ಚಿತ್ರವಿರಬಹುದಾ ಎಂಬ ಅನುಮಾನ ಹುಟ್ಟುಹಾಕುತ್ತದೆ. ಮುಂದೆ ನಡೆಯುವ ಕಥೆಯ ಕೆಲ ತುಣುಕುಗಳನ್ನು ಮೊದಲೇ ತೋರಿಸಿ, ಗೊಂದಲ ಮೂಡಿಸಿ, ಕುತೂಹಲ ಹುಟ್ಟಿಸುವ ಯತ್ನವನ್ನು ನಿರ್ದೇಶಕರು ಪ್ರಾರಂಭದಲ್ಲಿಯೇ ಮಾಡಿದ್ದಾರೆ. ಹೀಗಾಗಿ ಮುಖ್ಯ ಕಥೆ ತೆರೆದುಕೊಳ್ಳಲು ತುಸು ಸಮಯ ಹಿಡಿಯುತ್ತದೆ.</p>.<p>ಇದು ಪುಷ್ಪಗಿರಿ ಪೊಲೀಸ್ ಠಾಣೆಗೆ ಸಂಬಂಧಿತ ಕಥೆ ಎಂಬುದು ಗೊತ್ತಾದ ಬಳಿಕ ಕಥೆ ವೇಗ ಹೆಚ್ಚುತ್ತದೆ. ಇಡೀ ಕಥೆ ಒಂದೇ ರಾತ್ರಿಯಲ್ಲಿ ನಡೆಯುತ್ತದೆ. ಈ ಕಥೆಯ ಜತೆಗೆ ಪೊಲೀಸ್ ಠಾಣೆಯ ಹಿನ್ನೆಲೆ, ಅಲ್ಲಿನ ಅಧಿಕಾರಿ ವರ್ಗದ ಭ್ರಷ್ಟತನವನ್ನು ಪರಿಚಯಿಸುತ್ತ ಹೋದ ರೀತಿ ಚೆನ್ನಾಗಿದೆ. ಠಾಣೆಯ ಒಂದಿಬ್ಬರು ಕಾನ್ಸ್ಟೇಬಲ್ಗಳನ್ನು ಹೊರತುಪಡಿಸಿ ಮಿಕ್ಕೆಲ್ಲರೂ ಭ್ರಷ್ಟರು. ಯಾವ್ಯಾವುದೋ ಪ್ರಕರಣಕ್ಕೆ ನಿರಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸುವ ಈ ಠಾಣೆಗೆ ಮೈತುಂಬ ವಿರೋಧಿಗಳು. ಇಂಥ ಹೊತ್ತಿನಲ್ಲೊಬ್ಬ ಈ ಠಾಣೆಗೆ ಸವಾಲಾಗುತ್ತಾನೆ. ಆ ಸವಾಲು ಏನು?, ಆತ ಯಾರು?, ಅದರಿಂದ ಏನೆಲ್ಲ ಆಗುತ್ತದೆ ಎಂಬುದೇ ಚಿತ್ರಕಥೆ.</p>.<p>ಚಿತ್ರದ ಮೊದಲಾರ್ಧ ಮುಗಿದಿದ್ದೇ ಗೊತ್ತಾಗುವುದಿಲ್ಲ ಎನ್ನುವಷ್ಟು ಸೊಗಸಾಗಿದೆ. ಕಥೆ ಹಾಗೂ ದೃಶ್ಯಗಳನ್ನು ಕಟ್ಟಿಕೊಟ್ಟ ರೀತಿ ಅಲ್ಲಲ್ಲಿ ಮಲಯಾಳದ ‘ನಾಯಟ್ಟು’ ಸಿನಿಮಾವನ್ನು ನೆನಪಿಸುತ್ತದೆ. ಆದಾಗ್ಯೂ ಆ ಕಥೆಗೂ ಇದಕ್ಕೂ ನೇರ ಸಂಬಂಧವಿಲ್ಲ. ಚಿತ್ರ ಕನ್ನಡ ಹಾಗೂ ಮಲಯಾಳದಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಂಡಿರುವುದರಿಂದ ಸಾಕಷ್ಟು ಕಡೆ ಕನ್ನಡದ ಜತೆಗೆ ಮಲಯಾಳ ಬೋರ್ಡ್ಗಳು ಕಾಣಿಸುತ್ತವೆ. ಗಟ್ಟಿಯಾದ ಕಥೆಗೊಂದು ಅಚ್ಚರಿಯ ಕ್ಲೈಮ್ಯಾಕ್ಸ್ ನೀಡುವಲ್ಲಿ ನಿರ್ದೇಶಕರು ಎಡವಿದ್ದಾರೆ. ಜತೆಗೆ ದ್ವಿತೀಯಾರ್ಧವನ್ನು ಇನ್ನಷ್ಟು ಯೋಚಿಸಿ ಬರೆಯುವ, ಮರ್ಡರ್ ಮಿಸ್ಟ್ರಿಗೆ ಬೇಕಾದ ಕೊಂಡಿಗಳನ್ನು ಬೆಸೆದು ಕುತೂಹಲ ಉಳಿಸಿಕೊಳ್ಳುವ ಅವಕಾಶ ನಿರ್ದೇಶಕರಿಗಿತ್ತು. ಇಷ್ಟಾಗಿಯೂ ನಿರ್ದೇಶಕ ಪ್ರದೀಪ್ ಅರಸೀಕೆರೆ ಅವರ ಮೊದಲ ಸಿನಿಮಾವಿದು ಎಂದು ಎಲ್ಲಿಯೂ ಅನ್ನಿಸುವುದಿಲ್ಲ. </p>.<p>ಇನ್ಸ್ಪೆಕ್ಟರ್ ಆಗಿ ಜಾನ್ ಕೈಪಲ್ಲಿ ಪಾತ್ರಕ್ಕೆ ಸೂಕ್ತ ಎನ್ನಿಸುತ್ತಾರೆ. ಆದರೆ ಅವರ ಕನ್ನಡ ಡಬ್ಬಿಂಗ್ನಲ್ಲಿ ಇನ್ನಷ್ಟು ಗಮನಹರಿಸುವ ಅವಶ್ಯಕತೆಯಿತ್ತು. ಎಎಸ್ಪಿಯಾಗಿ ಪ್ರಮೋದ್ ಶೆಟ್ಟಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ದೇವರಾಜ್ ಪಾತ್ರ ಅತಿಥಿ ಪಾತ್ರದಂತಿದೆ. ಕಾನ್ಸ್ಟೇಬಲ್ ಶ್ರೀಜಿತ್ ರವಿ, ಕೆ.ಎಸ್.ಶ್ರೀಧರ್ ಸೇರಿದಂತೆ ಎಲ್ಲ ಕಲಾವಿದರು ಇವರೇ ಇದಕ್ಕೆ ಸೂಕ್ತ ಎನ್ನುವಂತೆ ನಟಿಸಿದ್ದಾರೆ. ಆನಂದ್ ಕುಮಾರ್ ಛಾಯಾಚಿತ್ರಗ್ರಹಣ ಸೊಗಸಾಗಿದೆ. ಪೂರ್ಣಚಂದ್ರ ತೇಜಸ್ವಿ ಅವರ ಹಿನ್ನೆಲೆ ಸಂಗೀತ ಬಹುತೇಕ ದೃಶ್ಯಗಳಿಗೆ ಶಕ್ತಿ ತುಂಬುತ್ತದೆ. ಚಿತ್ರವನ್ನು ಅಚ್ಚುಕಟ್ಟಾಗಿಸುವಲ್ಲಿ ಆಯೂಬ್ ಖಾನ್ ಅವರ ಸಂಕಲನ ಮುಖ್ಯಪಾತ್ರ ವಹಿಸಿದೆ.</p>.<p><strong>ನೋಡಬಹುದಾದ ಚಿತ್ರ</strong></p>.ಕಾಡುವ ‘ಸ್ತ್ರೀ’ ಚಿತ್ರಗಳೂ, ವಿಷಾದದ ಭಾವವೂ...ಸಂದರ್ಶನ | ಒಳ್ಳೆಯ ಪ್ರಯತ್ನ ಸೋತಾಗ ಭಯವಾಗುತ್ತದೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>