<p>ಉಡುಪಿ: ‘ಧರ್ಮ, ಜಾತಿಗಳ ಶ್ರೇಣೀಕರಣದಿಂದಾಗಿ ಭಾರತೀಯ ಸಿನಿಮಾಗಳು ಧರ್ಮ ಕೇಂದ್ರಿತವಾಗಿವೆ. ಈಚೆಗೆ ತೆರೆಕಂಡ ‘ದುರಂಧರ್’ ಸಿನಿಮಾವು ಏಕಮುಖವಾದ ಅಂತಹ ಸಿದ್ಧಾಂತದ ಹುಸಿ ವಾಸ್ತವಿಕತೆಯ ದೃಶ್ಯಾವಳಿಯಾಗಿದೆ. ಆ ಸಿನಿಮಾ ಉಗ್ರ ರಾಷ್ಟ್ರವಾದದ ಸಂಕೇತವಾಗಿದೆ’ ಎಂದು ಚಲನಚಿತ್ರ ನಿರ್ದೇಶಕ ಪಿ.ಎನ್. ರಾಮಚಂದ್ರ ಅಭಿಪ್ರಾಯಪಟ್ಟರು.</p>.<p>ರಥಬೀದಿ ಗೆಳೆಯರು ಉಡುಪಿ ಸಾಂಸ್ಕೃತಿಕ ವೇದಿಕೆ ವತಿಯಿಂದ ನಗರದ ಎಂಜಿಎಂ ಕಾಲೇಜಿನ ಧ್ವನ್ಯಾಲೋಕ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ದೇಶದ ಶೇ 99ರಷ್ಟು ಸಿನಿಮಾಗಳು ಪ್ರಬಲ ಸಿದ್ದಾಂತವೊಂದನ್ನು ಬಲಪಡಿಸುತ್ತಿರುವ ಸಿನಿಮಾಗಳಾಗಿವೆ. ಆ ಪ್ರಬಲ ಸಿದ್ದಾಂತಕ್ಕೆ ವಿರುದ್ಧವಾಗಿರುವ ಬೌದ್ಧ, ಜೈನ, ಆದಿವಾಸಿ ಸಿದ್ದಾಂತಗಳನ್ನು ತೋರಿಸಲಾಗುತ್ತಿಲ್ಲ’ ಎಂದರು.</p>.<p>‘ಭಾರತೀಯ ಚಿತ್ರಗಳು ಏಕತೆಯನ್ನು ಭಂಗಪಡಿಸುವ, ಮುಖ್ಯ ಕತೆಗೆ ಭಿನ್ನವಾಗಿ ನಿಲ್ಲುವ, ಹಾಸ್ಯ ಪ್ರೇಕ್ಷಕರ ಆಕರ್ಷಣೆಯನ್ನೇ ಮುಖ್ಯವಾಗಿಸುವ ಸಿನಿಮಾಗಳಾಗಿವೆ’ ಎಂದು ಹೇಳಿದರು.</p>.<p>‘ಒಂದು ಪ್ರಬಲ ಸಿದ್ಧಾಂತ, ಇನ್ನೊಂದು ಪ್ರಬಲವಲ್ಲದ ಸಿದ್ಧಾಂತಗಳ ತಿಕ್ಕಾಟ ಸಿನೆಮಾಗಳಲ್ಲಿರುತ್ತವೆ. ನಮ್ಮ ನಿಲುವು ವ್ಯಕ್ತವಾಗದಂತೆ ಮಾಡುವುದು ರಾಜಕೀಯ ಸಿನಿಮಾಗಳ ಕೆಲಸ. ನಮ್ಮತನವನ್ನು ಇಟ್ಟುಕೊಂಡು ಬದುಕಲು ರಾಜಕೀಯ ಅಗತ್ಯ’ ಎಂದು ತಿಳಿಸಿದರು.</p>.<p>‘ಮನೆಯೊಳಗಿನ ವೈಮನಸ್ಸು, ವಿರೋಧಗಳು ಕೂಡ ರಾಜಕೀಯದಿಂದಲೇ ಕೂಡಿರುತ್ತವೆ. ಕೆಲಸದ ಜಾಗದಲ್ಲಿ ವೇತನ ತಾರತಮ್ಯ, ಕಿರುಕುಳ, ಲಿಂಗ ತಾರತಮ್ಯ ಇತ್ಯಾದಿಗಳನ್ನು ಬಿಂಬಿಸುವ ಚಿತ್ರಗಳು ಇಂತಹ ರಾಜಕೀಯದ ಪ್ರಭಾವವನ್ನು ಹೊಂದಿರುತ್ತವೆ’ ಎಂದರು.</p>.<p>‘ರಾಜಕೀಯ ಚಲನಚಿತ್ರಗಳು ಪ್ರೇಕ್ಷಕರಲ್ಲಿ ಭಾವನಾತ್ಮಕ ಅಂಶವನ್ನು ಹಂತ ಹಂತವಾಗಿ ಉದ್ದೀಪನಗೊಳಿಸುತ್ತವೆ’ ಎಂದು ಹೇಳಿದರು.</p>.<p>ರಥ ಬೀದಿ ಗೆಳೆಯರು ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು. ನಾಟಕ ವಿಭಾಗದ ಸಂಚಾಲಕ ಸಂತೋಷ್ ನಾಯಕ್ ಪಟ್ಲ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಶಿ ವಂದಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260513-28-1845244630</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಉಡುಪಿ: ‘ಧರ್ಮ, ಜಾತಿಗಳ ಶ್ರೇಣೀಕರಣದಿಂದಾಗಿ ಭಾರತೀಯ ಸಿನಿಮಾಗಳು ಧರ್ಮ ಕೇಂದ್ರಿತವಾಗಿವೆ. ಈಚೆಗೆ ತೆರೆಕಂಡ ‘ದುರಂಧರ್’ ಸಿನಿಮಾವು ಏಕಮುಖವಾದ ಅಂತಹ ಸಿದ್ಧಾಂತದ ಹುಸಿ ವಾಸ್ತವಿಕತೆಯ ದೃಶ್ಯಾವಳಿಯಾಗಿದೆ. ಆ ಸಿನಿಮಾ ಉಗ್ರ ರಾಷ್ಟ್ರವಾದದ ಸಂಕೇತವಾಗಿದೆ’ ಎಂದು ಚಲನಚಿತ್ರ ನಿರ್ದೇಶಕ ಪಿ.ಎನ್. ರಾಮಚಂದ್ರ ಅಭಿಪ್ರಾಯಪಟ್ಟರು.</p>.<p>ರಥಬೀದಿ ಗೆಳೆಯರು ಉಡುಪಿ ಸಾಂಸ್ಕೃತಿಕ ವೇದಿಕೆ ವತಿಯಿಂದ ನಗರದ ಎಂಜಿಎಂ ಕಾಲೇಜಿನ ಧ್ವನ್ಯಾಲೋಕ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ದೇಶದ ಶೇ 99ರಷ್ಟು ಸಿನಿಮಾಗಳು ಪ್ರಬಲ ಸಿದ್ದಾಂತವೊಂದನ್ನು ಬಲಪಡಿಸುತ್ತಿರುವ ಸಿನಿಮಾಗಳಾಗಿವೆ. ಆ ಪ್ರಬಲ ಸಿದ್ದಾಂತಕ್ಕೆ ವಿರುದ್ಧವಾಗಿರುವ ಬೌದ್ಧ, ಜೈನ, ಆದಿವಾಸಿ ಸಿದ್ದಾಂತಗಳನ್ನು ತೋರಿಸಲಾಗುತ್ತಿಲ್ಲ’ ಎಂದರು.</p>.<p>‘ಭಾರತೀಯ ಚಿತ್ರಗಳು ಏಕತೆಯನ್ನು ಭಂಗಪಡಿಸುವ, ಮುಖ್ಯ ಕತೆಗೆ ಭಿನ್ನವಾಗಿ ನಿಲ್ಲುವ, ಹಾಸ್ಯ ಪ್ರೇಕ್ಷಕರ ಆಕರ್ಷಣೆಯನ್ನೇ ಮುಖ್ಯವಾಗಿಸುವ ಸಿನಿಮಾಗಳಾಗಿವೆ’ ಎಂದು ಹೇಳಿದರು.</p>.<p>‘ಒಂದು ಪ್ರಬಲ ಸಿದ್ಧಾಂತ, ಇನ್ನೊಂದು ಪ್ರಬಲವಲ್ಲದ ಸಿದ್ಧಾಂತಗಳ ತಿಕ್ಕಾಟ ಸಿನೆಮಾಗಳಲ್ಲಿರುತ್ತವೆ. ನಮ್ಮ ನಿಲುವು ವ್ಯಕ್ತವಾಗದಂತೆ ಮಾಡುವುದು ರಾಜಕೀಯ ಸಿನಿಮಾಗಳ ಕೆಲಸ. ನಮ್ಮತನವನ್ನು ಇಟ್ಟುಕೊಂಡು ಬದುಕಲು ರಾಜಕೀಯ ಅಗತ್ಯ’ ಎಂದು ತಿಳಿಸಿದರು.</p>.<p>‘ಮನೆಯೊಳಗಿನ ವೈಮನಸ್ಸು, ವಿರೋಧಗಳು ಕೂಡ ರಾಜಕೀಯದಿಂದಲೇ ಕೂಡಿರುತ್ತವೆ. ಕೆಲಸದ ಜಾಗದಲ್ಲಿ ವೇತನ ತಾರತಮ್ಯ, ಕಿರುಕುಳ, ಲಿಂಗ ತಾರತಮ್ಯ ಇತ್ಯಾದಿಗಳನ್ನು ಬಿಂಬಿಸುವ ಚಿತ್ರಗಳು ಇಂತಹ ರಾಜಕೀಯದ ಪ್ರಭಾವವನ್ನು ಹೊಂದಿರುತ್ತವೆ’ ಎಂದರು.</p>.<p>‘ರಾಜಕೀಯ ಚಲನಚಿತ್ರಗಳು ಪ್ರೇಕ್ಷಕರಲ್ಲಿ ಭಾವನಾತ್ಮಕ ಅಂಶವನ್ನು ಹಂತ ಹಂತವಾಗಿ ಉದ್ದೀಪನಗೊಳಿಸುತ್ತವೆ’ ಎಂದು ಹೇಳಿದರು.</p>.<p>ರಥ ಬೀದಿ ಗೆಳೆಯರು ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು. ನಾಟಕ ವಿಭಾಗದ ಸಂಚಾಲಕ ಸಂತೋಷ್ ನಾಯಕ್ ಪಟ್ಲ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಶಿ ವಂದಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260513-28-1845244630</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>